ಸುದ್ದಿ ಕಣಜ.ಕಾಂ | CITY | CRIME
ಶಿವಮೊಗ್ಗ: ವರ ಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಬಟ್ಟೆ ಖರೀದಿಸುವುದಕ್ಕಾಗಿ ಗಾಂಧಿ ಬಜಾರಿಗೆ ಹೋಗಿದ್ದ ಮಹಿಳೆಯೊಬ್ಬರ ಮೊಪೆಡ್ ವಾಹನದಿಂದ 1.85 ಲಕ್ಷ ರೂಪಾಯಿ ಕಳವು ಮಾಡಿದ ಘಟನೆ ಗುರುವಾರ ನಡೆದಿದೆ.
https://www.suddikanaja.com/2021/05/18/real-star-upendra-purchase-onion-from-farmer/
ಬೊಮ್ಮನಕಟ್ಟೆ ನಿವಾಸಿ ನಾಗರತ್ನ ಎಂಬುವವರು ಸ್ವ ಸಹಾಯ ಸಂಘದಿಂದ ಸಾಲ ಪಡೆದ ಹಣವನ್ನು ಮೊಪೆಡ್ ವಾಹನದಲ್ಲಿ ಇರಿಸಿ ಗಾಂಧಿ ಬಜಾರಿಗೆ ಹೋಗಿದ್ದು, ವಾಪಸ್ ಬಂದು ನೋಡಿದಾಗ ಡಿಕ್ಕಿಯಲ್ಲಿ ಇಟ್ಟಿದ್ದ ಹಣದ ಪರ್ಸ್ ಯಾರೋ ಕಳ್ಳತನ ಮಾಡಿರುವುದು ಗೊತ್ತಾಗಿದೆ. ತಕ್ಷಣ ಅವರು ತಮ್ಮ ಪತಿಗೆ ವಿಚಾರ ತಿಳಿಸಿದ್ದಾರೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಘದಿಂದ 2 ಲಕ್ಷ ರೂಪಾಯಿ ಸಾಲ ಪಡೆದಿದ್ದು, ಅದರಲ್ಲಿ 15 ಸಾವಿರ ರೂಪಾಯಿಯನ್ನು ಖರೀದಿಗಾಗಿ ಹೋಗುವಾಗ ತೆಗೆದುಕೊಂಡು ಹೋಗಿದ್ದಾರೆ. ಇನ್ನುಳಿದ ಹಣವನ್ನು ವಾಹನದಲ್ಲೇ ಇರಿಸಿದ್ದಾರೆ. ಈ ವೇಳೆ, ಕೃತ್ಯ ಎಸಗಲಾಗಿದೆ. ತನಿಖೆ ನಡೆಯುತ್ತಿದೆ.
https://www.suddikanaja.com/2021/03/23/online-fraud-by-a-company-to-bank-employee/