ಸುದ್ದಿ ಕಣಜ.ಕಾಂ | CITY | GANESH FESTIVAL
ಶಿವಮೊಗ್ಗ: ಹಿಂದೂ ಸಂಘಟನೆಗಳ ಮಹಾ ಮಂಡಳ (ಹಿಂದೂ ಮಹಾಸಭಾ) ಗಣೇಶ ಭಾನುವಾರ ಮಧ್ಯಾಹ್ನ ವಿಸರ್ಜನೆಯಾಗಲಿದೆ.
ಕೋವಿಡ್ ಹಿನ್ನೆಲೆ ಪ್ರತಿ ವರ್ಷ ವೈಭವೋಪೇತವಾಗಿ ನಡೆಯುವ ರಾಜಬೀದಿ ಮೆರವಣಿಗೆ ಈ ಸಲ ಇಲ್ಲ. ಆದರೂ ಅತ್ಯಂತ ಭಕ್ತಿ ಭಾವದಿಂದ ಗಣೇಶ ಪೂಜಾ ವಿಧಿಗಳು ನಡೆಯುತ್ತಿದ್ದು, ಇಂದು ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದಿವೆ.
ಮಹಾಮಂಗಳಾರತಿ ನಡೆಯುತ್ತಿದ್ದು, ಇದೆಲ್ಲವುಗಳ ನಂತರ ಗಣಪತಿಯನ್ನು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ತುಂಗಾ ಹೊಳೆಯಲ್ಲಿ ವಿಸರ್ಜನೆ ವಿಸರ್ಜನೆ ಮಾಡಲಾಗುವುದು. ಗಣಪತಿ ಪ್ರತಿಷ್ಠಾಪನೆ ಮಾಡಿ 10 ದಿನಗಳು ಪೂರ್ಣಗೊಂಡಿದ್ದು, ಪ್ರತಿ ಸಲದಂತೆ ಅನಂತ ಚತುರ್ದಶಿಯಂದು ಸರಳ ವಿಸರ್ಜನೆ ನಡೆಯಲಿದೆ.