ರೈಲು ನಿಲ್ದಾಣ ಮುಂದೆ ಫೂಟ್ ಬ್ರಿಜ್

 

 

ಶಿವಮೊಗ್ಗ: ನಗರದ ರೈಲು ನಿಲ್ದಾಣ ಮುಂಭಾಗದಲ್ಲಿ ರಿಂಗ್ ರೋಡ್ ದಾಟಲು ಸಾರ್ವಜನಿಕರಿಗೆ ತೊಂದರೆ ಆಗುವ ಸಾಧ್ಯತೆ ಇದೆ. ಹೀಗಾಗಿ, ಫೂಟ್ ಬ್ರಿಜ್ ನಿರ್ಮಾಣ ಮಾಡುವಂತೆ ಸಂಸದ ಬಿ.ವೈ. ರಾಘವೇಂದ್ರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಭಾನುವಾರ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ಸಂಸದರು, ರಿಂಗ್ ರೋಡ್ ಕಾಮಗಾರಿಯನ್ನೂ ಪರಿಶೀಲಿಸಿದರು. ಜನವರಿ ಹೊತ್ತಿಗೆ ಕೆಲಸ ಪೂರ್ಣಗೊಂಡು ರಸ್ತೆ ಜನಾರ್ಪಣೆಗೊಳ್ಳಲಿದೆ. ಈ ಮೂಲಕ ಸವಳಂಗ ಮತ್ತು ಬಾಲ್‌ರಾಜ್ ರಸ್ತೆಯ ಟ್ರಾಫಿಕ್ ಜಾಮ್ ಇಳಿಮುಖವಾಗಲಿದೆ. ಅದಕ್ಕೂ ಮುನ್ನ ಆಗಬೇಕಿರುವ ಕೆಲಸಗಳು ಸಾಕಷ್ಟಿದ್ದು, ಕೂಡಲೇ ಇಲ್ಲಿರುವ ವಿದ್ಯುತ್ ಪರಿವರ್ತಕ ಸ್ಥಳಾಂತರಿಸಬೇಕೆAದು ನಿರ್ದೇಶನ ನೀಡಿದರು.
ಶಾಸಕ ಕೆ.ಬಿ.ಅಶೋಕ್ ನಾಯ್ಕ್, ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ಸೂಡಾ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್, ಪುರುಷೋತ್ತಮ್ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!