ಸೊರಬ: ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಬಗ್ಗೆ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಸೊರಬ ಮಾಜಿ ಶಾಸಕ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದಾರೆ.
ಚೌಡೇಶ್ವರಿ ದೇವಿ ಬಿಜೆಪಿ, ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷಗಳ ಆಸ್ತಿಯಲ್ಲ. ಭಕ್ತರ ಆಸ್ತಿಯಾಗಿದ್ದಾರೆ. ಜನರ ಭಾವನೆಗಳಿಗೆ ವಿರುದ್ಧವಾಗಿ ದೇವಸ್ಥಾನವನ್ನು ಮುಜರಾಯಿಗೆ ಸೇರಿಸಲು ಬಿಜೆಪಿ ಸರಕಾರ ಹೊರಟಿದೆ’ ಎಂದು ಟೀಕಿಸಿದರು.
ನಿಮಗ್ಯಾರಿಗೂ ಒಳ್ಳೇದಾಗಲ್ಲ: ದೇವಿಯ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಚೌಡೇಶ್ವರಿ ವಿಷಯಕ್ಕೆ ಕೈಹಾಕಿರುವ ಇರ್ಯಾರಿಗೂ ಒಳ್ಳೆಯದಾಗಲ್ಲ. ಈಗ ರಚಿಸಿರುವ ಸಮಿತಿ ಕೂಡ ತಪ್ಪು ಎಂದು ಮಧು ಹೇಳಿದರು.