ಸುದ್ದಿ ಕಣಜ.ಕಾಂ ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರು ಇವರ ಬಗ್ಗೆ ಮನ್ ಕಿ ಬಾತ್ ನಲ್ಲಿ ವಿಚಾರ ಹಂಚಿಕೊAಡಾಗ ಇಡೀ ದೇಶವೇ ಮೆಚ್ಚಿಕೊಂಡಿತ್ತು. ಇವರೊಬ್ಬ ಮಾದರಿ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದರು.
ಮೋದಿ ಅವರ ಸ್ವಚ್ಚ ಭಾರತ್ ನಿಂದ ಪ್ರೇರಣೆಗೆ ಒಳಗಾದ ಶಿವಮೊಗ್ಗದ ಕಾಶಿಪುರ ನಿವಾಸಿ ಬಸವಲಿಂಗಪ್ಪ (76) ಅದನ್ನು ಪ್ರಾಯೋಗಿಕವಾಗಿ ತಮ್ಮ ಬದುಕಿನಲ್ಲಿ ಮೈಗೂಡಿಸಿಕೊಂಡಿದ್ದರು. ಆದರೆ, ಸೋಮವಾರ ಇವರು ಚಿರ ನಿದ್ರೆಗೆ ಜಾರಿದ್ದಾರೆ.
ಪ್ರತಿ ದಿನ ಬೆಳಗ್ಗೆ 4ರಿಂದ 7ರ ವರೆಗೆ ನಗರದ ಆರ್ಟಿಒ ಕಚೇರಿಯಿಂದ ಸರಕಾರಿ ನೌಕರರ ಭವನದವರೆಗೆ ಸ್ವಚ್ಚತೆ ಕಾರ್ಯ ಮಾಡುತ್ತಿದ್ದರು. ಅದನ್ನಷ್ಟಕ್ಕೇ ಬಿಡದೇ ಮಹಾನಗರ ಪಾಲಿಕೆಯ ಸಿಬ್ಬಂದಿಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ಕೂಡ ನೀಡುತ್ತಿದ್ದರು. ಕಸ ಸಂಗ್ರಹಿಸಿಕೊAಡು ಹೋದ ಬಳಿಕವೇ ಅವರೂ ಮನೆಗೆ ತೆರಳುತ್ತಿದ್ದರು. ತಮ್ಮ ಕಾಯಕದ ಮೂಲಕವೇ ಅವರು ಎಲ್ಲರಿಗೂ ಬಸಣ್ಣ ಹೆಸರಿನಿಂದ ಹತ್ತಿರವಾಗಿದ್ದರು.
ತಮ್ಮ ಖರ್ಚಲ್ಲೇ ಟ್ರಿ ಗಾರ್ಡ್: ಜಿಲ್ಲಾ ಕೋರ್ಟ್ ಆವರಣದಲ್ಲಿ ಸ್ಟಾö್ಯಂಪ್ ಪೇಪರ್ ಮಾರಾಟ ಮಾಡುತ್ತಿದ್ದ ಬಸಣ್ಣ ಆರ್ಥಿಕವಾಗಿ ಸದೃಢರಲ್ಲದಿದ್ದರೂ ಅಲ್ಪ ಆದಾಯದಲ್ಲಿಯೇ ಹಣ ಉಳಿತಾಯ ಮಾಡಿ ಸಾವಿರಾರು ಸಸಿಗಳನ್ನು ನೆಟ್ಟಿದ್ದಾರೆ. ಅವುಗಳ ರಕ್ಷಣೆಗೆಂದೇ ಟ್ರಿ ಗಾರ್ಡ್ ಗಳನ್ನು ಸ್ವಂತ ಖರ್ಚಲ್ಲಿ ಹಾಕಿದ್ದಾರೆ.
ಡಿಸಿ ಕಚೇರಿ ರಸ್ತೆ, ಸವಳಂಗ ರಸ್ತೆ ಮತ್ತು ಕೋಟ್ ರಸ್ತೆ ಇಕ್ಕೆಲಗಳಲ್ಲಿ ಈಗ ಬೃಹದಾಕಾದಲ್ಲಿ ಬೆಳೆದು ನಿಂತಿರುವ ಮರಗಳು ಬಸಣ್ಣನ ಬಗ್ಗೆ ಕಥೆಯನ್ನೇ ಹೇಳುತ್ತವೆ. ಬೇಸಿಗೆಯಲ್ಲಿ ಇವುಗಳಿಗೆ ನೀರುಣಿಸಿ ಮಕ್ಕಳಂತೆ ನೋಡಿಕೊಂಡಿದ್ದಾರೆ. ಹಬ್ಬ ಹರಿದಿನಗಳಲ್ಲಿ ಮಾವಿನ ಮರಗಳಿಗೆ ರಕ್ಷಣೆ ನೀಡಿದ್ದಾರೆ.
ಇವರಿಂದು ನಿಧನರಾಗಿದ್ದರೂ ತಂಪು ಗಾಳಿ ಬೀಸುವ ಮರಗಳಲ್ಲಿ ಜೀವಂತವಾಗಿದ್ದಾರೆ. ಬಸಣ್ಣ ಅವರಿಗೆ ಪತ್ನಿ, ಒಬ್ಬ ಪುತ್ರ, ಒಬ್ಬರು ಪುತ್ರಿ ಇದ್ದಾರೆ