ಜೂನ್ 22ರಂದು ಕರೆಂಟ್ ಕಟ್, ಎಲ್ಲೆಲ್ಲಿ ವಿದ್ಯುತ್ ಪೂರೈಕೆ ಇರಲ್ಲ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ತುರ್ತು ಕಾಮಗಾರಿ ಹಿನ್ನೆಲೆ ಜೂನ್ 22ರಂದು ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ‌ ವ್ಯತ್ಯಯವಾಗಲಿದೆ.
ಆಲ್ಕೋಳ ವಿದ್ಯುತ್ ವಿತರಣೆ ಕೇಂದ್ರದಿಂದ ಬರುವ ಎ.ಎಫ್-1, 2 ಮತ್ತು 3 ರ ಫೀಡರ್ ಗಳಲ್ಲಿ ಮಾರ್ಗ ಮುಕ್ತತೆ ನೀಡಬೇಕಾಗಿದ್ದು ಈ ವಿತರಣೆ ಕೇಂದ್ರದಿಂದ ಸರಬರಾಜಾಗುವ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ.

READ | ಬಿಪಿಎಲ್ ಕುಟುಂಬಕ್ಕೆ ಸಿಗಲಿದೆ ಫುಡ್ ಕಿಟ್, ಯಾವಾಗಿಂದ ವಿತರಣೆ, ಕಿಟ್‍ನಲ್ಲಿ ಏನೇನಿದೆ?

ಎಲ್ಲೆಲ್ಲಿ ಕರೆಂಟ್ | ಶ್ರೀರಾಮಪುರ, ಭೂಮಿಕಾ ಇಂಡಸ್ಟ್ರೀಸ್, ಪೆಸಿಟ್ ಕಾಲೇಜ್, ಕಿಮ್ಮನೆ ಗಾಲ್ಫ್ ಸ್ಟೇಡಿಯಂ, ಹಾಲದೇವರ ಹೊಸೂರು, ಗುಡ್ಡದ ಹರಕೆರೆ, ಶಕ್ತಿಧಾಮ, ಪೊಲೀಸ್ ಲೇಔಟ್, ವಿರುಪಿನಕೊಪ್ಪ, ಸಿದ್ಲಿಪುರ, ಮುದ್ದಿನಕೊಪ್ಪ, ಭೋವಿ ಕಾಲೋನಿ, ತ್ಯಾವರೆಕೊಪ್ಪ ಸಿಂಹಧಾಮ, ಗುಡ್ಡದ ಹರಕರೆ, ವೀರಗಾರನಭೈರನಕೊಪ್ಪ, ಬಿಎಸ್‍ಎನ್‍ಎಲ್ ಬಡಾವಣೆ, ಲಂಬಾಣಿ ತಾಂಡ, ಚೆನ್ನಹಳ್ಳಿ, ವೀರನಬೆನವಳ್ಳಿ, ಆಲ್ಕೊಳ, ಮಂಗಳಾಮಂದಿರ ರಸ್ತೆ, ಎಬಿವಿಪಿ ಲೇಔಟ್, ಎಸ್.ವಿ.ಬಡಾವಣೆ, ಗಾಡಿಕೊಪ್ಪ, ಮಲ್ಲಿಗೇನಹಳ್ಳಿ, ಶರಾವತಿ ದಂತ ವೈದ್ಯಕೀಯ ಕಾಲೇಜು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ಉಪ ವಿಭಾಗ 3 ರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

https://www.suddikanaja.com/2021/05/28/shivamogga-all-areas-will-get-drinking-water/

error: Content is protected !!