ಸುದ್ದಿ ಕಣಜ.ಕಾಂ | TALUK | CRIME NEWS
ಶಿಕಾರಿಪುರ: ತಾಲೂಕಿನ ಶಿರಾಳಕೊಪ್ಪ ಪಟ್ಟಣದಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿ ದನದ ಮಾಂಸ ಮಾರಾಟ ಮಾಡುತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿ, ಆತನ ಬಳಿಯಿಂದ ದನ, ಕರು ಹಾಗೂ ಮಾಂಸವನ್ನು ಸೋಮವಾರ ವಶಕ್ಕೆ ಪಡೆಯಲಾಗಿದೆ.
ಶಿರಾಳಕೊಪ್ಪ ನಿವಾಸಿ ಶೇರ್ ಆಲಿ ಬಂಧಿತ ಆರೋಪಿ. ಅಕ್ರಮವಾಗಿ ತಗಡಿನ ಶೆಡ್ ನಲ್ಲಿ ದನದ ಮಾಂಸ ಮಾರಾಟ ಮಾಡುವಾಗ ದಾಳಿ ಮಾಡಿ ಈತನಿಂದ ₹5,000 ಬೆಲೆ ಬಾಳುವ 25 ಕೆಜಿ ಮಾಂಸ ವಶ ಪಡಿಸಿಕೊಳ್ಳಲಾಗಿದೆ.
READ | ಕುವೆಂಪು ವಿಶ್ವವಿದ್ಯಾಲಯಕ್ಕೆ ನುಗ್ಗಿದ ಕಾಡಾನೆಗಳು ವಾಪಸ್
ಈತನ ಬಳಿ ಇದ್ದ ಜಾನುವಾರುಗಳೆಷ್ಟು?
ಶೇರ್ ಅಲಿ ಮತ್ತು ಜೈನುಲ್ಲಾ ತಂದೆ ಹಕೈದ್ ಎಂಬುವವರು ಮನೆಯ ಒಂದು ಕೋಣೆಯಲ್ಲಿ ದನ ಕಡಿದು ಮಾಂಸ ಮಾರಾಟ ಮಾಡುವಾಗ ಆತನ ಬಳಿ ಎರಡು ಸಾವಿರ ಬೆಲೆ ಬಾಳುವ 10 ಕೆಜಿ ದನದ ಮಾಂಸ ಸಿಕ್ಕಿದೆ. ದನ ಕಡಿಯಲು ತಂದಿದ್ದ 88,500 ಬೆಲೆ ಬಾಳುವ ಎರಡು ಎಮ್ಮೆ, 3 ಆಕಳು ಮತ್ತು 4 ಗಂಡು ಕರು ಗಳನ್ನು ವಶಕ್ಕೆ ಪಡೆದು ದನಗಳಿಗೆ ಹಾನಗಲ್ ತಾಲ್ಲೂಕು ಹೊಂಕಣ ಗ್ರಾಮದ ಗೋ ಶಾಲೆಗೆ ಬಿಟ್ಟು ಬಂದಿದ್ದು, ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ.