ಹರ್ಷ ಕೊಲೆ ಕೇಸ್, ಇನ್ನಿಬ್ಬರ ಬಂಧನ, ಇದುವರೆಗೆ ಎಷ್ಟು ಜನ ಅರೆಸ್ಟ್?

 

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಭಜರಂಗ ದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಇಲಿಯಾಸ್ ನಗರದ ಫರಾಜ್ ಪಾಶಾ (24), ವಾದಿ ಎ ಹುದಾ ನಿವಾಸಿ ಅಬ್ದುಲ್ ಖಾದರ್ ಜಿಲಾನ್ (25) ಬಂಧಿತರು.

READ | ಶಿವಮೊಗ್ಗ ಮೇಲೆ ‘ನೇತ್ರಾ ವಿ3’ ಡ್ರೋನ್ ಕಣ್ಣು, ತೀವ್ರ ನಿಗಾಕ್ಕೆ ಒಟ್ಟು 6 ಡ್ರೋನ್, ಏನಿದರ ವಿಶೇಷ?

ಇದುವರೆಗೆ ಒಟ್ಟು 6 ಜನರ ಬಂಧನ
ಕೊಲೆಯಾದ ರಾತ್ರಿಯೇ ಸೈಯದ್ ನದೀಮ್ ಎಂಬಾತನನ್ನು ಬಂಧಿಸಲಾಗಿತ್ತು. ನಂತರ, ಮಹಮ್ಮದ್ ಖಾಸೀಫ್ ಅರೆಸ್ಟ್ ಆಗಿದ್ದರು. ಬಳಿಕ ಕ್ಲಾರ್ಕ್ ಪೇಟೆ ನಿವಾಸಿಗಳಾದ ರಿಹಾನ್ ಶರೀಫ್ (22), ಆಸೀಫ್ ಉಲ್ಲಾಖಾನ್ (22), ಟ್ಯಾಂಕ್ ಮೊಹಲ್ಲಾದ ಅಬ್ದುಲ್ ಅಫಾನ್ (21), ಮುರಾದ್ ನಗರದ ನಿಹಾನ್ (21) ಎಂಬುವವರನ್ನು ಬಂಧಿಸಲಾಗಿತ್ತು. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!