ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸವಳಂಗ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲು ಹರಿದು ಕಾರ್ಮಿಕನೊಬ್ಬನ ಕಾಲು ತುಂಡಾದ ಘಟನೆ ನಡೆದಿದೆ.
ಒಡಿಶಾ ಮೂಲದ ಆದಿ ಅಲಿಯಾಸ್ ಸದ್ಪತಿ ಪಂಜಿ(23) ಎಂಬಾತನ ಕಾಲು ಕಳೆದುಕೊಂಡಾತ. ತೀವ್ರ ಗಾಯಗೊಂಡಿರುವ ಈತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
READ | ಎದೆಗಾರಿಕೆಯಿಂದ ಹೇಳುವ ಒಂದೇ ಒಂದು ಯೋಜನೆ ಹೇಳಲಿ, ಧ್ರುವನಾರಾಯಣ್ ರಾಜ್ಯ ಸರ್ಕಾರಕ್ಕೆ ಸವಾಲ್
ರೈಲ್ವೆ ಮೇಲ್ಸೇತುವೆ ಕಾಮಗಾರಿಗಾಗಿ ಬಂದಿದ್ದ ಕಾರ್ಮಿಕ
ಸವಳಂಗ ರಸ್ತೆಯಲ್ಲಿ ನಡೆಯುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಗೋಸ್ಕರ ಈತ ಬಂದಿದ್ದು, ರಾತ್ರಿ ಘಟನೆ ನಡೆದಿದೆ.
ಕೆಲವರ ಪ್ರಕಾರ, ಆದಿ ಮದ್ಯ ಸೇವಿಸಿ ರೈಲ್ವೆ ಹಳಿಯ ಮೇಲೆ ನಿದ್ರೆ ಮಾಡುತ್ತಿದ್ದ ಎನ್ನಲಾಗಿದೆ. ಆಗ ತಾಳಗುಪ್ಪ-ಮೈಸೂರು ರೈಲು ಕಾಲಿನ ಮೇಲೆ ಹರಿದಿದೆ. ಕಾರ್ಮಿಕನ ಚೀರಾಟ ಕೇಳಿದ ಸ್ಥಳೀಯರು ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಪೊಲೀಸ್ ಮೂಲಗಳ ಪ್ರಕಾರ, ಮೂತ್ರ ವಿಸರ್ಜನೆಗೆಂದು ಹೋದಾಗ ಘಟನೆ ನಡೆದಿದೆ. ಘಟನೆ ಹೇಗೆ ನಡೆಯಿತು ಎಂಬುವುದರ ಬಗ್ಗೆ ಖಚಿತವಾಗಿ ತಿಳಿದುಬಂದಿಲ್ಲ.
https://suddikanaja.com/2022/11/25/accident-at-tunga-bridge/