ಸುದ್ದಿ ಕಣಜ.ಕಾಂ ಶಿವಮೊಗ್ಗ
Shivamogga: ಶಿವಮೊಗ್ಗದಲ್ಲಿ ಶಾಸಕ ಕೆ.ಎಸ್.ಈಶ್ವರಪ್ಪ (KS Eshwarappa) ಅವರಿಂದಾಗಿ ಕೋಮುಗಲಭೆಗಳು (communal clash) ಸಂಭವಿಸುತ್ತಿವೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ (HS Sundaresh)(ಆರೋಪಿಸಿದ್ದು, ಬಹುಶಃ ಅವರಿಗೆ ಇತಿಹಾಸ ಜ್ಞಾನ ಇರಲಿಕ್ಕಿಲ್ಲ ಎಂದು ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ (ಚನ್ನಿ) ಟಾಂಗ್ ನೀಡಿದರು.
TOP 10 NEWS | ಶಿವಮೊಗ್ಗದ ಇಂದಿನ ಟಾಪ್ 10 ಸುದ್ದಿಗಳ ಕಣಜ ಇಲ್ಲಿದೆ
ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 1933 ಮತ್ತು 1947 ರಲ್ಲಿಯೇ ಶಿವಮೊಗ್ಗದಲ್ಲಿ ಗಲಾಟೆಗಳಾಗಿದ್ದವು. ಶಿವಮೂರ್ತಿ ಸೇರಿದಂತೆ ಹಿಂದೂಗಳ ಹತ್ಯೆಯಾಗಿತ್ತು. ಆಗ ಕೆ.ಎಸ್. ಈಶ್ವರಪ್ಪ ಶಾಸಕರೂ ಆಗಿರಲಿಲ್ಲ. ಬಿಜೆಪಿ ಅಧಿಕಾರದಲ್ಲಿಯೂ ಇರಲಿಲ್ಲ. ಇದು ಹೇಗೆ ಬಿಜೆಪಿ ಕೋಮು ಗಲಭೆಗೆ ಕಾರಣವಾಗುತ್ತದೆ? ಎಂದು ಪ್ರಶ್ನಿಸಿದರು.
ಕೋಮುಗಲಭೆಗಳಿಗೆ ಕಾಂಗ್ರೆಸ್ನ ಮುಸ್ಲಿಂ ತುಷ್ಟೀಕರಣ ಕಾರಣವೇ ವಿನಹ ಬಿಜೆಪಿ ಅಲ್ಲ. ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಆರೋಪದಲ್ಲಿ ಹುರುಳಿಲ್ಲ. ಸತ್ಯಕ್ಕೆ ದೂರವಾಗಿವೆ. ಕಾಂಗ್ರೆಸ್ ಪಕ್ಷದವರಿಗೆ ಸತ್ಯ ಹೇಳಿ ಗೊತ್ತಿಲ್ಲ. ಸತ್ಯ ಅರಗಿಸಿಕೊಳ್ಳುವ ಶಕ್ತಿಯೂ ಇಲ್ಲ.
| ಎಸ್.ಎನ್.ಚನ್ನಬಸಪ್ಪ, ಬಿಜೆಪಿ ಮುಖಂಡ
ಮುಸ್ಲಿಮರನ್ನು ಓಲೈಸುವುದರಿಂದಲೇ ತಮಗೆ ಓಟ್ ಸಿಗುತ್ತದೆಂದು ಕಾಂಗ್ರೆಸ್ ನವರು ಈ ಎಲ್ಲ ಕೆಲಸಗಳನ್ನು ಮಾಡುತ್ತಿದ್ದಾರೆ. ಜನ ಈಗಾಗಲೇ ಕಾಂಗ್ರೆಸ್ ಅನ್ನು ಮರೆತು ಬಿಟ್ಟಿದ್ದಾರೆ ಎಂದರು.
ಗೋವಿಂದರಾಜ್ to ಹರ್ಷ ಕೊಲೆ
ಶಿವಮೊಗ್ಗದಲ್ಲಿ ಗೋವಿಂದರಾಜ್ ಕೊಲೆಯಿಂದ ಹಿಡಿದು ಹರ್ಷನ ಕೊಲೆಯವರೆಗೆ ಹಿಂದೂಗಳ ಕೊಲೆ ನಡೆದಿವೆ. ಹಿಂದೂಗಳ ಜೀವಗಳಿಗೆ ಬೆಲೆಯೇ ಇಲ್ಲ. ಗಲಭೆಗಳನ್ನು ಸೃಷ್ಟಿಸಿ ಚುನಾವಣೆಯಲ್ಲಿ ಗೆಲ್ಲಬೇಕೆಂಬ ಆಸೆಯೂ ಬಿಜೆಪಿಗೆ ಇಲ್ಲ. ವೈಚಾರಿಕತೆಯನ್ನು ಗಟ್ಟಿ ಮಾಡುವುದೇ ರಾಷ್ಟ್ರದ ಐಕ್ಯತೆಗೆ ಶ್ರಮಿಸುವುದೇ ಬಿಜೆಪಿಯ ಗುರಿ. ಗೋಹತ್ಯೆ ವಿರೋಧಿಸುವುದು, ಶ್ರೀರಾಮ ಮಂದಿರ ಕಟ್ಟುವುದು ಹೇಗೆ ಕೋಮುವಾದವಾಗುತ್ತದೆ? ಎಂದು ಪ್ರಶ್ನಿಸಿದರು.
ಇನ್ನು ಅಭಿವೃದ್ಧಿ ವಿಚಾರದಲ್ಲಿ ಶಿವಮೊಗ್ಗ ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ಅವರುಗಳಿಂದಾಗಿ ಸಾಕಷ್ಟು ಅಭಿವೃದ್ಧಿ ಕಂಡಿದೆ, ಕಾಣುತ್ತಿದೆ ಎಂದು ಹೇಳಿದರು.
ಪಕ್ಷದ ಪ್ರಮುಖರಾದ ಜ್ಞಾನೇಶ್ವರ್, ಜಗದೀಶ್, ನಾಗರಾಜ್, ಬಳ್ಳೆಕೆರೆ ಸಂತೋಷ್, ಎಂ.ಜಿ. ಬಾಲು ಉಪಸ್ಥಿತರಿದ್ದರು.