ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಬಿ.ಎಚ್.ರಸ್ತೆ(BH Road)ಯ ರಾಯಲ್ ಆರ್ಕಿಡ್ ಸಮೀಪ ವ್ಯಕ್ತಿಯ ಮೇಲೆ ಚೂಪಾದ ವಸ್ತುವಿನಿಂದ ಹಲ್ಲೆ ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ಸಾಗರ ಪಟ್ಟಣದ ಹೊಸನಗರ ರಸ್ತೆಯ ಎ-2 ಆಸಿಫ್ ಅಲಿಯಾಸ್ ಚಿಲ್ಲಿ(26) ಎಂಬಾತನನ್ನು ಬಂಧಿಸಲಾಗಿದೆ.
READ | ರಾಯಲ್ ಆರ್ಕಿಡ್ ಸಮೀಪ ಯುವಕನ ಮೇಲೆ ಅಟ್ಯಾಕ್
ಅಶೋಕ್ ಪ್ರಭು ಎಂಬಾತ ರಸ್ತೆಯ ಮೇಲೆ ನಡೆದುಕೊಂಡು ಹೋಗುವಾಗ ಏಕಾಏಕಿ ಹಲ್ಲೆ ಮಾಡಿ ಮೊಬೈಲ್ ಕೊಡುವಂತೆ ಬೆದರಿಸಿದ್ದರು. ಆತ ಭಯಪಟ್ಟು ಅಲ್ಲಿಂದ ಪರಾರಿಯಾಗಿದ್ದ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.