ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಅಡಿಕೆ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಒಂದೇ ಪರಿಹಾರ ಅದು ಪ್ರತ್ಯೇಕ ಅಡಕೆ ಮಂಡಳಿ ಸ್ಥಾಪನೆ ಎಂದು ಕೃಷಿ ವಿಜ್ಞಾನಿ ಪ್ರೊ.ಪ್ರಕಾಶ್ ಕಮ್ಮರಡಿ (Prof.prakash kammardi) ಅಭಿಪ್ರಾಯಪಟ್ಟರು.
READ | 21/11/2022ರ ಅಡಿಕೆ ಧಾರಣೆ, ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ದರ?
ಎಪಿಎಂಸಿಯಲ್ಲಿರುವ ಅಡಿಕೆ ವರ್ತಕರ ಸಂಘದ ಸಭಾ ಭವನದಲ್ಲಿ ಸೋಮವಾರ ಕರೆದಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಫಿ ಸೇರಿದಂತೆ ಹಲವು ವಾಣಿಜ್ಯ ಬೆಳೆಗಳಿಗೆ ಮಂಡಳಿ ಇದೆ. ಅದು ಸಂಕಷ್ಟ ಎದುರಾದರೆ ದನಿ ಎತ್ತುತ್ತದೆ. ಅಂತಹ ವ್ಯವಸ್ಥೆಯೇ ಅಡಕೆಗಿಲ್ಲ. ಅಡಕೆ ಬೆಲೆ ಸುಸ್ಥಿರವಾಗಿದ್ದು, ಅಡಕೆಯ ಪರ್ಯಾಯ ಉತ್ಪನ್ನಗಳು ಹೊರಬರಬೇಕಾದರೆ ಮಂಡಳಿ ಸ್ಥಾಪಿಸುವ ಅಗತ್ಯವಿದೆ ಎಂದು ಹೇಳಿದರು.
ಮಂಡಳಿ ಸ್ಥಾಪನೆಗೆ ರೈತರಿಂದಲೂ ಸೆಸ್ ರೂಪದಲ್ಲಿ ಶುಲ್ಕ ಸಂಗ್ರಹಿಸಿ ಸರ್ಕಾರ ಮತ್ತು ರೈತರ ಸಹಭಾಗಿತ್ವದಲ್ಲಿ ಇದನ್ನು ನಡೆಸಬಹುದು.
ನೀಡಬೇಕಿದೆ `ಆರ್’ ಆಂಡ್ `ಡಿ’ಗೆ ಒತ್ತು
ಅಡಿಕೆ ಬೆಳೆಗೆ ಇನ್ನಷ್ಟು ಅವಕಾಶಗಳ ಹೆಬ್ಬಾಗಿಲು ತೆರೆದುಕೊಳ್ಳಬೇಕಾದರೆ, ಸಂಶೋಧನೆ ಮತ್ತು ಅಭಿವೃದ್ಧಿಯ ಅವಶ್ಯಕತೆ ಇದೆ. ಅಡಿಕೆಯಿಂದ ಈಗಾಗಲೇ ಹಲವು ಉಪ ಉತ್ಪನ್ನಗಳನ್ನು ಆವಿಷ್ಕರಿಸಲಾಗಿದೆ. ಇನ್ನಷ್ಟು ಅವಕಾಶಗಳಿದ್ದು, ಅದರ ಬಗ್ಗೆ ಸಂಶೋಧನೆ ಮಾಡಲು ಮಂಡಳಿ ಅಗತ್ಯ ಎಂದು ತಿಳಿಸಿದರು.
ಅಡಿಕೆಗೆ ಕ್ಯಾನ್ಸರ್’ಕಾರಕವೆಂಬ ಆರೋಪ
ಅಡಿಕೆ ಕ್ಯಾನ್ಸರ್’ಕಾರಕವೆಂಬ ಬಗ್ಗೆ ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಅಫಿಡೇವಿಟ್ ಸಲ್ಲಿಸಿದೆ. ಅದರ ಬಗ್ಗೆ ಸಂಶೋಧನೆಗಳು ನಡೆದು ಅಡಿಕೆಗಿರುವ ಸಾಂಸ್ಕøತಿಕ ಹಿನ್ನೆಲೆ ಮತ್ತು ಆರೋಗ್ಯಕ್ಕಿರುವ ಲಾಭದ ಬಗ್ಗೆ ತಿಳಿಸುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯಬೇಕಿದೆ. ಇದರೆಡೆಗೂ ಗಮನಹರಿಸಬೇಕಾದರೆ ಪ್ರತ್ಯೇಕ ಮಂಡಳಿಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
READ | ಚಿನ್ನಾಭರಣ ಖರೀದಿಸುವವರಿಗೆ ತುಸು ನಿರಾಳ, ಚಿನ್ನದ ಬೆಲೆಯಲ್ಲಿ ಇಳಿಕೆ
ಅಡಿಕೆ ಬೆಳೆಗಾರರು, ವರ್ತಕರೂ ಆದ ಕಿಮ್ಮನೆ ಜಯರಾಮ್, ಪ್ರಮುಖರಾದ ಡಿ.ಎಂ.ಶಂಕರಪ್ಪ, ದೇವಕುಮಾರ್, ಮಾದೇಶ ಹೆಗ್ಡೆ, ಮಂಜುನಾಥ್, ಕೆ.ಟಿ.ಗಂಗಾಧರ್, ಅನಿಲ್ಕುಮಾರ್, ನೇತ್ರಾವತಿ, ಚಿದಂಬರ್ ರಾವ್ ಉಪಸ್ಥಿತರಿದ್ದರು.