ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಡಿಎಚ್ಓ ಕಚೇರಿ ಆವರಣದಲ್ಲಿ ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ ನೇತೃತ್ವದಲ್ಲಿ ಗುರುವಾರ ಧರಣಿ ಸತ್ಯಾಗ್ರಹ ಮಾಡಲಾಯಿತು.
READ | ಪೊಲೀಸರಿಂದ ವಿದ್ಯಾರ್ಥಿಗಳಿಗೆ ವಿನೂತನ ‘ತೆರೆದ ಮನೆ’ ಕಾರ್ಯಕ್ರಮ, ಏನಿದರ ಪ್ರಯೋಜನ?
ಶಶಿಕಾಂತ್ ಗೌಡರ ಆರೋಪ ಮತ್ತು ಬೇಡಿಕೆಗಳೇನು?
- ಭದ್ರಾವತಿ ತಾಲೂಕಿನ ಉಜ್ಜನೀಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಮತ್ತು ಸಿಬ್ಬಂದಿ ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗುತ್ತಿಲ್ಲ.
- ಬೆಳಗ್ಗೆ 10 ಗಂಟೆ ಅಥವಾ 11 ಗಂಟೆಯಾದರೂ ವೈದ್ಯರು ಆಸ್ಪತ್ರೆಗೆ ಬರುವುದಿಲ್ಲ. ಈ ಹಿಂದೆಯೂ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ತನಿಖೆ ನಡೆಸಬೇಕು ಎಂದು ನಾವು ದೂರು ಸಲ್ಲಿಸಿದ್ದೆವು. ಆದರೂ ಕೂಡ ಇದುವರೆಗೂ ಯಾವುದೇ ಕ್ರಮ ತೆಗೆದು ಕೊಂಡಿಲ್ಲ. ಇದಕ್ಕೆ ಸಾಕ್ಷಿಯಾಗಿ ವೀಡಿಯೋ ಚಿತ್ರೀಕರಣ ಕೂಡ ನಾವು ನೀಡಿದ್ದೆವು.
- ಕರ್ತವ್ಯ ಲೋಪ ಎಸಗಿರುವ ಭದ್ರಾವತಿ ತಾಲೂಕು ಆರೋ ಗ್ಯಾಧಿಕಾರಿ ಹಾಗೂ ಹೊಸಮನೆ, ಅಶ್ವತ್ಥ ನಗರ, ಉಜ್ಜಿನೀಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಸೂಕ್ತ ತನಿಖೆ ನಡೆಸಬೇಕು.
ಡಿಎಸ್ಎಸ್ ಜಿಲ್ಲಾ ಸಂಚಾಲಕಿ ಸುನೀತಾ ರಾಜ್, ರಶ್ಮಿ, ವೆಂಕಟೇಶ್ ಉಪಸ್ಥಿತರಿದ್ದರು.