Arrest | ಪೊಲೀಸರ ದಿಢೀರ್ ದಾಳಿ, ಇಬ್ಬರ ಬಂಧನ

police

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜೀವ್ ಗಾಂಧಿ ಬಡಾವಣೆ ಹತ್ತಿರ ಯಾರೋ ಇಬ್ಬರು ವ್ಯಕ್ತಿಗಳು ಅಕ್ರಮವಾಗಿ ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ‌ ನಡೆಸಿ ಇಬ್ಬರನ್ನು ಬಂಧಿಸಲಾಗಿದೆ.
ಮಂಜುನಾಥ ಬಡಾವಣೆ ನಿವಾಸಿ ಧನುಶ್ ಅಲಿಯಾಸ್ ಧನು(20), ಲಷ್ಕರ್ ಮೊಹಲ್ಲಾದ ಸುರೇಶ್ ಅಲಿಯಾಸ್ ಸೀನು(21) ಬಂಧಿತ ಆರೋಪಿಗಳು.

READ | ಶಿವಮೊಗ್ಗ ವಿಮಾನ‌‌ ನಿಲ್ದಾಣಕ್ಕೆ ಆಗಮಿಸಿದ ಎರಡನೇ ವಿಮಾನ

ಸಿಇಎನ್‌ ಠಾಣೆ (CEN Police station) ಪಿಐ ಸಂತೋಷ್ ಎಂ. ಪಾಟೀಲ್ ಮತ್ತು ಸಿಬ್ಬಂದಿ‌ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದವರನ್ನು‌ ಬಂಧಿಸಿದ್ದಾರೆ. ಆರೋಪಿತರಿಂದ ಅಂದಾಜು ₹30,000 ಮೌಲ್ಯದ ಒಟ್ಟು 1 ಕೆಜಿ 150 ಗ್ರಾಂ ತೂಕದ ಒಣ ಗಾಂಜಾ ಮತ್ತು ₹200 ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ.

error: Content is protected !!