ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕುಂಸಿ ಪೊಲೀಸ್ ಠಾಣೆ (kumsi police station) ವ್ಯಾಪ್ತಿಯ ತಾಲೂಕಿನ ಆಯನೂರಿನ ಚಿನ್ಮನೆ ಸಮೀಪ ಖಾಸಗಿ ಬಸ್ (private bus) ಮತ್ತು ಬೈಕ್ (bike) ಮಧ್ಯೆ ಅಪಘಾತ (accident) ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ.
READ | ಶಿವಮೊಗ್ಗದಲ್ಲಿ ಗಣೇಶ ಹಬ್ಬ ಆಚರಣೆಗೆ ಗೈಡ್ ಲೈನ್ಸ್, ಏನೆಲ್ಲ ಸೂಚನೆ?
ಮೃತನನ್ನು ಹೊಸನಗರ (Hosanagar) ತಾಲೂಕಿನ ಹಿರೇಹಕ್ಲು ಗ್ರಾಮದ ನಿವಾಸಿ ಗುರುಮೂರ್ತಿ(40) ಎಂದು ಗುರುತಿಸಲಾಗಿದೆ. ಬೈಕ್ ಸವಾರ ಆಯನೂರು ಕಡೆಯಿಂದ ರಿಪ್ಪನ್ಪೇಟೆ (ripponpet) ಕಡೆ ಹೋಗುತ್ತಿದ್ದರು. ಅದೇ ಮಾರ್ಗದಲ್ಲಿ ಕುಂದಾಪುರ (kundapura) ಕಡೆಯಿಂದ ಖಾಸಗಿ ಬಸ್ ಆಗಮಿಸುತ್ತಿತ್ತು. ಈ ವೇಳೆ ಅಪಾಘಾತ ಸಂಭವಿಸಿದ್ದು, ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ. ತೀವ್ರ ರಕ್ತಸ್ರಾವ ಪರಿಣಾಮ ಬೈಕ್ ಸವಾರ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.