
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಭಾರತ ಸರ್ಕಾರ (Government of India), ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ (Neharu Yuva Kendra) ಶಿವಮೊಗ್ಗ, ರಾಷ್ಟ್ರೀಯ ಸೇವಾ ಯೋಜನೆ(NSS), ಕುವೆಂಪು ವಿಶ್ವವಿದ್ಯಾಲಯ (Kuvempu University) ಹಾಗೂ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು (ATNCC) ಇವರುಗಳ ಸಂಯುಕ್ತ ಆಶ್ರಯದಲ್ಲಿ ಜೂನ್ 8ರಂದು ಕುವೆಂಪು ರಂಗಮಂದಿರದಲ್ಲಿ ‘ಅಮೃತ ಕಾಲದ ಪಂಚಪ್ರಾಣ- ನಮ್ಮ ಹೆಮ್ಮೆಯ ಸಂಸ್ಕೃತಿ ಮತ್ತು ಪರಂಪರೆ’ ಎಂಬ ವಿಷಯದಡಿ ಜಿಲ್ಲಾ ಮಟ್ಟದಲ್ಲಿ ‘ಯುವ ಉತ್ಸವ-2023’ ಎಂಬ ವಿನೂತನ ಸ್ಪರ್ಧಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಯಾರೆಲ್ಲ ಭಾಗವಹಿಸಲು ಅವಕಾಶ?
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು 15 ರಿಂದ 29 ವರ್ಷ ವಯೋಮಿತಿವುಳ್ಳವರಾಗಿರಬೇಕು. ಶಿವಮೊಗ್ಗ ಜಿಲ್ಲೆಯಲ್ಲಿ ವಾಸವಿರುವ ಯುವಕ, ಯುವತಿಯರು ಮಾತ್ರ ಭಾಗವಹಿಸಬಹುದು.
ಯುವ ಜನತೆಗೆ ವಿವಿಧ ಪ್ರತಿಭೆಗಳ ಅನಾವರಣ ಹಾಗೂ ಸ್ಪರ್ಧಾ ಕಾರ್ಯಕ್ರಮವನ್ನು ನಡೆಸಲಾಗುವುದು. ಇದರಲ್ಲಿ ವಿಜೇತ ತಂಡ/ ಅಭ್ಯರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನ ಹಾಗೂ ಆಕರ್ಷಕ ಪಾರಿತೋಷಕ/ಪ್ರಶಸ್ತಿ ಪತ್ರ ನೀಡಲಾಗುವುದು. ಇದರಲ್ಲಿ ಪ್ರಥಮ ಸ್ಥಾನ ಪಡೆದು ವಿಜೇತರಾದವರು ರಾಜ್ಯ ಮಟ್ಟದಲ್ಲಿ ಭಾಗವಹಿಸಬಹುದಾಗಿದೆ. ರಾಜ್ಯ ಮಟ್ಟದಲ್ಲಿ ವಿಜೇತರಾದವರು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಬಹುದಾಗಿದೆ. ಸ್ಥಳೀಯ ಯುವ ಪ್ರತಿಭೆಗಳನ್ನು ಬೆಳಕಿಗೆ ತರುವ ಉದ್ದೇಶದಿಂದ ಹಾಗೂ ಮನೋರಂಜನೆ ಅಲ್ಲದೇ ಸಾಮಾಜಿಕ ಸಂದೇಶವನ್ನು ಯುವ ಜನರಿಗೆ ಮುಟ್ಟಿಸುವ ಕೆಲಸವು ಈ ಸ್ಪರ್ಧಾ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.
ಸ್ಪರ್ಧೆಗಳ ವಿವರ ಮತ್ತು ನಿಯಮಗಳು
- ಯುವ ಕಲಾವಿದರ ಚಿತ್ರಾಕಲಾ ಸ್ಪರ್ಧೆ(Painting): ಸಮಯ ಅವಕಾಶ 1 ಗಂಟೆ, ಚಿತ್ರಬಿಡಿಸುವ ಪರಿಕರಗಳನ್ನು ಸ್ಪರ್ಧಿಗಳೆ ತರತಕ್ಕದ್ದು. ಡ್ರಾಯಿಂಗ್ ಶೀಟ್ ಮಾತ್ರ ನೀಡಲಾಗುವುದು ಪ್ರಥಮ- ₹1,000, ದ್ವಿತೀಯ ₹750, ತೃತೀಯ ₹500 ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು. ವಿಷಯ: ಪಂಚಪ್ರಾಣ-ನಮ್ಮ ಹೆಮ್ಮೆಯ ಸಂಸ್ಕೃತಿ ಮತ್ತು ಪರಂಪರೆ
- ಮೊಬೈಲ್ ಛಾಯಾಗ್ರಹಣ ಸ್ಪರ್ಧೆ(Mobile Photography): ಸಮಯ ಅವಕಾಶ 2 ಗಂಟೆ, ಪ್ರಥಮ ₹1,000, ದ್ವಿತೀಯ ₹750, ತೃತೀಯ ₹500 ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು.
- ಯುವ ಬರಹಗಾರರ ಸ್ಪರ್ಧೆ (ಕವಿತೆ ರಚನೆ ಮಾಡುವುದು)(Young Writers Contest): ಸಮಯ ಅವಕಾಶ 45 ನಿಮಿಷ, ಕನ್ನಡ, ಹಿಂದಿ, ಇಂಗ್ಲೀಷ್ನಲ್ಲಿ ಬರೆಯಬಹುದು. ಪ್ರಥಮ ₹1,000, ದ್ವಿತೀಯ ₹750 ತೃತೀಯ ₹500 ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು. ವಿಷಯ: ಪಂಚಪ್ರಾಣ -ನಮ್ಮ ಹೆಮ್ಮೆಯ ಸಂಸ್ಕೃತಿ ಮತ್ತು ಪರಂಪರೆ.
- ಭಾಷಣ ಸ್ಪರ್ಧೆ(Speech Contest): ಸಮಯ ಅವಕಾಶ 7 ನಿಮಿಷ, ಕನ್ನಡ/ ಹಿಂದಿ, ಇಂಗ್ಲೀಷ್, ಭಾಷೆಯಲ್ಲಿ ಮಾತನಾಡಲು ಅವಕಾಶವಿರುತ್ತದೆ. ಪ್ರಥಮ ₹5,000, ದ್ವಿತೀಯ ₹2,000, ತೃತೀಯ ₹1,000 ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು. ವಿಷಯ: ಪಂಚಪ್ರಾಣ -ನಮ್ಮ ಹೆಮ್ಮೆಯ ಸಂಸ್ಕೃತಿ ಮತ್ತು ಪರಂಪರೆ.
- ಸಾಂಸ್ಕ್ರತಿಕ ಉತ್ಸವ -ಜಾನಪದ ನೃತ್ಯ: ಇದು ಗುಂಪು ಸ್ಪರ್ಧೆಯಾಗಿದ್ದು ತಂಡದಲ್ಲಿ ಕನಿಷ್ಠ 8, ಗರಿಷ್ಠ 10 ಜನ ಇರಬೇಕು. ಸಮಯ ಅವಕಾಶ 10 ನಿಮಿಷ ಆಗಿರುತ್ತದೆ. ಪ್ರಥಮ ₹5,000, ದ್ವಿತೀಯ ₹2,500, ತೃತೀಯ ₹1250 ಬಹುಮಾನ ನೀಡಲಾಗುವುದು. ಜಾನಪದ ನೃತ್ಯವು ಜಾನಪದ ಪ್ರಕಾರ ಮತ್ತು ಕರ್ನಾಟಕ/ ಭಾರತೀಯ ಶೈಲಿಯದ್ದಾಗಿರಬೇಕು. ನಿಮ್ಮ ತಂಡದ ಹೆಸರನ್ನು ನಮೂದಿಸಿನೊಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಲು ಕೊನೆಯ ದಿನಾಂಕ ಜೂನ್ 5 ಮೊದಲು ನೋಂದಣಿ ಮಾಡಿಕೊಂಡವರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.
READ | ಮೈಸೂರು ನ್ಯಾಯಾಲಯದಲ್ಲಿ 45 ಹುದ್ದೆಗಳು ಖಾಲಿ, ಯಾರೆಲ್ಲ ಅರ್ಜಿ ಸಲ್ಲಿಸಲು ಅವಕಾಶ?
ಸೂಚನೆ: ಈ ಎಲ್ಲ ಸ್ಪರ್ಧಾ ಕಾರ್ಯಕ್ರಮದಲ್ಲಿ ಒಬ್ಬರಿಗೆ ಒಂದು ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. (ಸಾಂಸ್ಕೃತಿಕ ಕಾರ್ಯಕ್ರಮ ಹೊರತು ಪಡಿಸಿ) ಸ್ಪರ್ಧಾ ಕಾರ್ಯಕ್ರಮದಲ್ಲಿ ಸಂಘಟಕರು ಮತ್ತು ತೀರ್ಪುಗಾರರ ತೀರ್ಮಾನವೇ ಅಂತಿಮ. ಭಾಗವಹಿಸುವ ತಂಡಗಳಿಗೆ ಯಾವುದೇ ಪ್ರಯಾಣ ಭತ್ಯೆ ನೀಡಲಾಗುವುದಿಲ್ಲ. ಭಾಗವಹಿಸುವ ಸ್ಪರ್ಧಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗುವುದು. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 08182-220883, 7975443499, ಇ-ಮೇಲ್ ಐಡಿ:- [email protected].
QR code ಸ್ಕ್ಯಾನ್ ಮಾಡಿ ನೋಂದಣಿ ಮಾಡಕೊಳ್ಳತಕ್ಕದ್ದು.