7 ದಿನ ಪೊಲೀಸ್ ಕಸ್ಟಡಿಯಲ್ಲಿರಲಿದ್ದಾರೆ ಹಂದಿ ಅಣ್ಣಿ ಕೊಲೆ ಆರೋಪಿಗಳು

Accused Handi anni

 

 

ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಳಿ‌ ಶರಣಾಗಿದ್ದ ರೌಡಿಶೀಟರ್ ಹಂದಿ‌ ಅಣ್ಣಿ ಕೊಲೆಗೈದ ಆರೋಪಿಗಳನ್ನು ಬುಧವಾರದಿಂದ ಏಳು ದಿನ ಪೊಲೀಸರ ವಶಕ್ಕೆ ನೀಡಲಾಗಿದೆ.
ಕಾರ್ತಿಕ್, ನಿತಿನ್, ಮಧು, ಫಾರೂಕ್, ಆಂಜನೇಯ, ಮದನ್, ಮಧು ಮತ್ತು ಚಂದನ್ ಎಂಬುವವರನ್ನು ಪೊಲೀಸ್ ವಶಕ್ಕೆ ನೀಡಲಾಗಿದೆ. ಬುಧವಾರ ಆರೋಪಿಗಳನ್ನು ಶಿವಮೊಗ್ಗ ನ್ಯಾಯಾಲಯದ ಮುಂದೆ‌ ಹಾಜರು ಪಡಿಸಿದ್ದು, ಪ್ರಕರಣದ ಬಗ್ಗೆ ಇನ್ನಷ್ಟು ತನಿಖೆ ಮಾಡಬೇಕಾದ ಅಗತ್ಯವಿರುವುದರಿಂದ ಪೊಲೀಸರು ವಶಕ್ಕೆ‌ ಪಡೆದಿದ್ದಾರೆ.

READ | ಶಿವಮೊಗ್ಗ ಪೊಲೀಸರ ಕಸ್ಟರಿಯಲ್ಲಿ ಹಂದಿ ಅಣ್ಣಿ ಕೊಲೆ‌ ಆರೋಪಿಗಳು, ಇಂದೇನೇನು ಪ್ರಕ್ರಿಯೆ ನಡೆಯಲಿವೆ?

ಜುಲೈ 14ರಂದು ವಿನೋಬನಗರ ಪೊಲೀಸ್ ಚೌಕಿ ಬಳಿ ರೌಡಿಶೀಟರ್ ಹಂದಿ‌ ಅಣ್ಣಿಯನ್ನು ಮಾರಕಾಸ್ತೃಗಳಿಂದ‌ ಬರ್ಬರ ಕೊಲೆ ಮಾಡಲಾಗಿತ್ತು. ಎಂಟು ಜನ ದುಷ್ಕರ್ಮಿಗಳು ಪುತ್ತೂರಿನಲ್ಲಿ ಕಾರನ್ನು ಬಾಡಿಗೆ ಪಡೆದು ಶಿವಮೊಗ್ಗಕ್ಕೆ ಬಂದು ಕೊಲೆ ಮಾಡಿ ಪರಾರಿಯಾಗಿದ್ದರು. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ‌ ನಡೆಯುತ್ತಿದೆ.

Leave a Reply

Your email address will not be published. Required fields are marked *

error: Content is protected !!