- ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ, ದೊಣ್ಣೆ, ಕಲ್ಲು, ರಾಡಿನಿಂದ ಹಲ್ಲೆ
- ಘಟನೆ ನಡೆದ ಬೆನ್ನಲ್ಲೇ ಪೊಲೀಸರಿಂದ ಶಿರಾಳಕೊಪ್ಪ ಪಟ್ಟಣ ವ್ಯಾಪ್ತಿಯ ಅಂಗಡಿ ಮುಂಗಟ್ಟುಗಳು ಕ್ಲೋಸ್
ಸುದ್ದಿ ಕಣಜ.ಕಾಂ | TALUK | 22 AUG 2022
ಶಿಕಾರಿಪುರ: ತಾಲೂಕಿನ ಶಿರಾಳಕೊಪ್ಪ(Shiralakoppa)ದಲ್ಲಿ ಇಂದಿರಾಗಾಂಧಿ ಸ್ಟೇಡಿಯಂ(Indiragandhi stadium)ನಲ್ಲಿ ಸೋಮವಾರ ನಡೆದ ವಲಯ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟದ ವಾಲಿಬಾಲ್ ಪಂದ್ಯಾವಳಿ (vollyball tournment) ವೇಳೆ ಜಗಳವಾಗಿದೆ. ತದನಂತರದ ಬೆಳವಣಿಗೆಗಳಿಂದಾಗಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ.
READ | ಶಿವಮೊಗ್ಗದ ಮೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ
ಶಿಕಾರಿಪುರ(Shikaripura)ದ ಮಂಚಿನಕೊಪ್ಪ (Manchinakoppa) ಗ್ರಾಮದ ನಿವಾಸಿ ಅಣ್ಣಪ್ಪ(20) ಪಂದ್ಯಾವಳಿಯನ್ನು ನೋಡುತ್ತಿದ್ದಾಗ ಯಾರೋ ಒಬ್ಬ ವ್ಯಕ್ತಿಯು ಅಡ್ಡಲಾಗಿ ಕುರ್ಚಿ ಹಾಕಿಕೊಂಡು ಕುಳಿತಿದ್ದಾನೆ. ಆಗ ಆತನಿಗೆ ಪಂದ್ಯಾವಳಿಯು ಕಾಣುತ್ತಿಲ್ಲ ಪಕ್ಕಕ್ಕೆ ಸರಿ ಎಂದು ಹೇಳಿದಾಗ ಆ ವ್ಯಕ್ತಿಯು ಅವಾಚ್ಯ ಶಬ್ದಗಳಿಂದ ಬೈದು ಕಪ್ಪಾಳಕ್ಕೆ ಹೊಡೆದಿರುತ್ತಾನೆ. ಅಣ್ಣಪ್ಪನ ಜೊತೆಗಿದ್ದ ಮಂಚಿನಕೊಪ್ಪ ಗ್ರಾಮದ ಇತರರು ಸೇರಿ ಜಗಳವನ್ನು ಬಿಡಿಸಿರುತ್ತಾರೆ.
ಊರಿಗೆ ಹೋಗುವಾಗ ಅಡ್ಡಗಟ್ಟಿ ಗಲಾಟೆ
ಅಣ್ಣಪ್ಪ, ಪವನ್, ಮಣಿಕಂಠ, ಪುನೀತ್, ಪ್ರಮೋದ್, ಶಿವರಾಜ್ ಅವರುಗಳು ತಮ್ಮ ಊರಿಗೆ ಹೋಗಲೆಂದು ಬೈಕ್ ಗಳಲ್ಲಿ ಹಿಂದಿರುಗುತ್ತಿದ್ದಾಗ, ಗಲಾಟೆ ಮಾಡಿದ ವ್ಯಕ್ತಿಯು ತನ್ನೊಂದಿಗೆ ಶಿರಾಳಕೊಪ್ಪದ ಪರ್ವೀಜ್(26) ಅವರು ಜಬೀವುಲ್ಲಾ(23), ಶಕೀಲ್(30) ಮತ್ತು ಇತರರನ್ನು ತನ್ನ ಜೊತೆ ಕರೆದುಕೊಂಡು ಬಂದು ಎಚ್.ಕೆ.ರಸ್ತೆಯ ಹೊಂಡದ ಕೆರೆ ಸರ್ಕಲ್ ಹತ್ತಿರ ಇವರುಗಳನ್ನು ಅಡ್ಡಗಟ್ಟಿದ್ದಾರೆ. ಕಲ್ಲು, ದೊಣ್ಣೆ ಮತ್ತು ರಾಡಿನಿಂದ ಅಣ್ಣಪ್ಪ ಮತ್ತು ಆತನ ಜೊತೆಗಿದ್ದವರ ಮೇಲೆ ಹಲ್ಲೆ ಮಾಡಿ, ಜಾತಿನಿಂದನೆ ಮಾಡಿರುತ್ತಾರೆ. ನಂತರ ಗಾಯಾಳನ್ನು ಚಿಕಿತ್ಸೆ ಸಂಬಂಧ ಶಿರಾಳಕೊಪ್ಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿಗಳ ಮೇಲೆ ಐಪಿಸಿ ಕಲಂ 143, 147, 148, 504, 341, 323, 324, 506 ಸಹಿತ 149 ಮತ್ತು ಎಸ್.ಸಿ ಎಸ್.ಟಿ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗುತ್ತಿದೆ. ಪ್ರಕರಣ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುತ್ತಿದೆ.
https://suddikanaja.com/2022/07/26/shiralakoppa-police-arrested-bike-theft-gang-and-siezed-sandal/