ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕುವೆಂಪು ವಿಶ್ವವಿದ್ಯಾಲಯದ ಆಡಿಯೋ ವಿಷ್ಯುಯಲ್ ಸ್ಟುಡಿಯೋದಲ್ಲಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಹಾಲಸ್ವಾಮಿ ಅವರು ವಿದ್ಯಾರ್ಥಿಗಳಿಗೆ ವೃತ್ತಿಯ ಬಗ್ಗೆ ಟಿಪ್ಸ್ ನೀಡಿದರು.
READ | ಟೈಲರಿಂಗ್, ಡ್ರೆಸ್ ಡಿಸೈನ್ ಉಚಿತ ತರಬೇತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು, ಎಷ್ಟು ದಿನಗಳ ಕ್ಲಾಸ್?
ಭಾವಿ ಪತ್ರಕರ್ತರಿಗೆ ನೀಡಿದ ಸಲಹೆಗಳು
- ಪತ್ರಿಕೋದ್ಯಮ ವಿದ್ಯಾರ್ಥಿಗಳು ವೃತ್ತಪತ್ರಿಕೆಗಳನ್ನು ಮಾಹಿತಿಗಾಗಿ ಓದುವ ಜೊತೆಗೆ ಅಧ್ಯಯನ ದೃಷ್ಠಿಯಿಂದ ಗಮನಿಸುವುದು ಸೂಕ್ತ.
- ಪ್ರತಿಯೊಬ್ಬ ವಿದ್ಯಾರ್ಥಿಯು ಮೊದಲು ಮುದ್ರಣ ಮಾಧ್ಯಮದಲ್ಲಿ ಕೆಲಸ ಆರಂಭಿಸುವುದು ಉತ್ತಮ. ಅಲ್ಲಿ ಅಪಾರವಾದ ಬರವಣಿಗೆ ಕೌಶಲ, ವೃತ್ತಿ ತಂತ್ರಗಳು ಕರಗತ ಮಾಡಿಕೊಳ್ಳಲು ಅವಕಾಶಗಳಿರುತ್ತವೆ.
- ಹೊಸ ವಿಚಾರಗಳನ್ನು ಜನರಿಗೆ ಅರ್ಥಪೂರ್ಣವಾಗಿ ತಲುಪಿಸಲು ಕುವೆಂಪು, ಪಿ. ಲಂಕೇಶ್, ಪೂರ್ಣಚಂದ್ರ ತೇಜಸ್ವಿಯಂತಹ ಮೇರು ಸಾಹಿತಿಗಳ ಪುಸ್ತಕಗಳನ್ನು ಓದುತ್ತಿರಬೇಕು.
- ಸಾಹಿತ್ಯದ ಓದಿನ ಜೊತೆಗೆ ಪತ್ರಿಕೆಗಳು ರೂಪುಗೊಂಡಿರುವ ಬಗೆ, ಪ್ರವೃತ್ತಿಗಳನ್ನು ಎಚ್ಚರದ ಕಣ್ಣುಗಳಲ್ಲಿ ಗಮನಿಸುತ್ತಿದ್ದರೆ ವೃತ್ತಿಯಲ್ಲಿ ನೆಲೆಯೂರುವುದು, ಯಶ ಕಾಣುವುದು ಸಾಧ್ಯ.
- ಪತ್ರಿಕೆಗಳ ಕೆಲಸದಲ್ಲಿ ಗಳಿಸುವ ಆಳವಾದ ಜ್ಞಾನದೊಂದಿಗೆ, ಧೈರ್ಯವಾಗಿ, ಸ್ಪಷ್ಟವಾಗಿ ಮಾತನಾಡುವುದನ್ನು ಕಲಿತರೆ ದೃಶ್ಯ ಮಾಧ್ಯಮದಲ್ಲಿ ಭವಿಷ್ಯದಲ್ಲಿ ವಿಫುಲ ಅವಕಾಶಗಳಿವೆ.
ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಎಂ.ಆರ್.ಸತ್ಯಪ್ರಕಾಶ್ ಸೇರಿದಂತೆ ಉಪನ್ಯಾಸಕರು, ಸಂಶೋಧನಾರ್ಥಿಗಳು, ತಾಂತ್ರಿಕ ಸಿಬ್ಬಂದಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗಿಯಾಗಿದ್ದರು.