ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕುವೆಂಪು ವಿಶ್ವವಿದ್ಯಾಲಯ(Kuvempu university)ದ ಕುಲಸಚಿವ (registrar) ಹಾಗೂ ಹಣಕಾಸು ಅಧಿಕಾರಿ(finance officer)ಗೆ ಹುದ್ದೆಗಳಿಗೆ ನಿಯೋಜನೆ ಮಾಡಿ ವಿವಿ ಕುಲಪತಿ ಆದೇಶಿಸಿದ್ದಾರೆ.
ಕೆಎಎಸ್ ಸೂಪರ್ ಟೈಮ್ ಸ್ಕೇಲ್ ಅಧಿಕಾರಿಯಾಗಿದ್ದ ಜಿ.ಅನುರಾಧ ಅವರನ್ನು ಬೇರೆಡೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಹಾಗೂ ಹಣಕಾಸು ಅಧಿಕಾರಿಯಾಗಿದ್ದ ಎಸ್.ರಾಮಕೃಷ್ಣ ಅವರ ಕೋರಿಕೆಯ ಮೇರೆ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿತ್ತು. ಈ ಎರಡೂ ಸ್ಥಾನಗಳ ಜವಾಬ್ದಾರಿಯನ್ನು ಮೌಲ್ಯಮಾಪನ ಕುಲಸಚಿವರಿಗೆ ವಹಿಸಲಾಗಿತ್ತು.
READ | ಒಂದು ವರ್ಷಕ್ಕೆ ಹುಲಿ ದತ್ತು ಪಡೆದ ಸರ್ಕಾರಿ ನೌಕರರ ಸಂಘ, ಸಿ.ಎಸ್.ಷಡಾಕ್ಷರಿ ಹೇಳಿದ್ದೇನು?
ಯಾರ್ಯಾರ ನಿಯೋಜನೆ?
ಕುಲಸಚಿವ ಹುದ್ದೆಗೆ ಕುವೆಂಪು ವಿವಿಯ ಸ್ನಾತಕೋತ್ತರ ಶಿಕ್ಷಣ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಹಾಗೂ ಶಿಕ್ಷಣ ನಿಕಾಯದ ಡೀನ್ ಪ್ರೊ.ಸಿ.ಗೀತಾ ಅವರನ್ನು ನಿಯೋಜಿಸಲಾಗಿದೆ.
ಪ್ರಭಾರ ಹಣಕಾಸು ಅಧಿಕಾರಿಯಾಗಿ ಕುವೆಂಪು ವಿವಿಯ ಸ್ನಾತಕೋತ್ತರ ಜೈವಿಕ ತಂತ್ರಜ್ಞಾನ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಹಾಗೂ ಯೋಜನೆ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಂಡಳಿಯ ನಿರ್ದೇಶಕ ಪ್ರೊ.ವೈ.ಎಲ್.ರಾಮಚಂದ್ರ ಅವರನ್ನು ನಿಯೋಜಿಸಲಾಗಿದೆ.