ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಮ ಪಂಚಾಯಿತಿ (Grama Panchayat) ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗವು ವೇಳಾಪಟ್ಟಿಯನ್ನು ಹೊರಡಿಸಿದೆ.
ಚುನಾವಣೆ ವೇಳಾಪಟ್ಟಿ
ಜಿಲ್ಲೆಯ ಭದ್ರಾವತಿ ಮತ್ತು ಹೊಸನಗರ ತಾಲ್ಲೂಕಿನಲ್ಲಿ ಚುನಾವಣೆ ನಡೆಯಲಿದೆ. ಫೆ.8 ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ ದಿನಾಂಕವಾಗಿರುತ್ತದೆ. ಫೆ.14 ನಾಮಪತ್ರಗಳನ್ನು ಸಲ್ಲಿಸಲು ಕಡೆಯ ದಿನವಾಗಿದೆ. ಫೆ.15 ನಾಮಪತ್ರಗಳನ್ನು ಪರಿಶೀಲಿಸುವ ದಿನ. ಫೆ.17 ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನ. ಫೆ.25 ಮತದಾನ ಅವಶ್ಯವಿದ್ದರೆ, ಮತದಾನ ನಡೆಸಬೇಕಾದ ದಿನ. ಫೆ.27 ಮರು ಮತದಾನದ ಅವಶ್ಯವಿದ್ದರೆ, ಮತದಾನ ನಡೆಸಬೇಕಾದ ದಿನ. ಫೆ.28 ಮತಗಳ ಎಣಿಕೆ ದಿನ ಮತ್ತು ಚುನಾವಣೆ ಮುಕ್ತಾಯ ದಿನವಾಗಿದೆ.
READ | ಅದ್ಧೂರಿ ರಾಜಬೀದಿ ಉತ್ಸವದ ಮೂಲಕ ಗಂಡನ ಮನೆ ಸೇರಿದ ಶ್ರೀ ಮಾರಿಕಾಂಬಾ, 9ರಂದು ಕಲಾಸಿರಿ ಕಾರ್ಯಕ್ರಮ
ಯಾವ್ಯಾವ ಗ್ರಾಪಂಗಳಲ್ಲಿ ಚುನಾವಣೆ?
- ಭದ್ರಾವತಿ ತಾಲ್ಲೂಕಿನ ಯಡೇಹಳ್ಳಿ ಗ್ರಾ.ಪಂ ಯ ಚಂದನಕರೆ(ಸಾಮಾನ್ಯ) 1 ಸ್ಥಾನ, ನಾಮಪತ್ರಗಳನ್ನು ಯಡೇಹಳ್ಳಿ ಗ್ರಾ.ಪಂ ಯಲ್ಲಿ ಸಲ್ಲಿಸಬೇಕು.
- ಹೊಸನಗರ ತಾಲ್ಲೂಕಿನ ಹೆದ್ದಾರಿಪುರ ಗ್ರಾ.ಪಂ ಯ ತಳಲೆ (ಹಿಂದುಳಿದ ‘ಅ’ವರ್ಗ) 01 ಸ್ಥಾನ ನಾಮಪತ್ರಗಳನ್ನು ಹೆದ್ದಾರಿಪುರ ಗ್ರಾ.ಪಂ ಯಲ್ಲಿ ಸಲ್ಲಿಸಬೇಕು.
- ಹೊಸನಗರ ತಾಲ್ಲೂಕಿನ ನಾಗೋಡಿ(ನಿಟ್ಟೂರು) ಗ್ರಾ.ಪಂ ಯ ಕೋಟೆಶಿರೂರು(ಸಾಮಾನ್ಯ ಮಹಿಳೆ) 1 ಸ್ಥಾನ ಮತ್ತು ಹೆಬ್ಬಿಗೆ(ಸಾಮಾನ್ಯ) 1 ಸ್ಥಾನ ನಾಗೋಡಿ(ನಿಟ್ಟೂರು) ಇಲ್ಲಿ ನಾಮಪತ್ರಗಳನ್ನು ಸಲ್ಲಿಸಬೇಕು.
ಫೆ.8 ರಿಂದ 28ರವರೆಗೆ ಚುನಾವಣೆ ನಡೆಯುವ ಗ್ರಾ.ಪಂ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಸದರಿ ಪ್ರದೇಶಗಳಲ್ಲಿ ಎಲ್ಲ ಮದ್ಯದ ಅಂಗಡಿಗಳನ್ನು ಮತ್ತು ಮದ್ಯ ತಯಾರಿಕಾ ಘಟಕಗಳನ್ನು ಅದರ ಮಾಲೀಕರು, ಅಧಿಭೋಗದಾರರು ಮುಚ್ಚತಕ್ಕದ್ದು ಹಾಗೂ ಮಹರು ಮಾಡಿದ ಕೀಯನ್ನು ತಾಲ್ಲೂಕು ತಹಶೀಲ್ದಾರರಿಗೆ ಒಪ್ಪಿಸಬೇಕೆಂದು ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಆದೇಶಿಸಿದ್ದಾರೆ.