HIGHLIGHTS
- ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಬೈಕ್ ಕಳ್ಳತನ ಪ್ರಕರಣ ದಾಖಲು
- ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ವೇಳೆ ಅನ್ನಸಂತರ್ಪಣೆ ಮುಗಿಸಿ ಬರುವ ಹೊತ್ತಿಗೆ ಬೈಕ್ ಕಳವು
ಸುದ್ದಿ ಕಣಜ.ಕಾಂ | SHIVAMOGGA CITY | 18 SEP 2022
ಶಿವಮೊಗ್ಗ: ನಗರದಲ್ಲಿ ಎರಡು ಬೈಕ್ (Bike)ಗಳನ್ನು ಕಳ್ಳತನ (Theft) ಮಾಡಿಕೊಂಡು ಹೋಗಿರುವ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
READ | ಕಿರುಕುಳ ತಾಳಲಾಗದೇ ಆತ್ಮಹತ್ಯೆ ಮಾಡಿಕೊಂಡ ಯುವಕ
ಪ್ರಕರಣ 1 | ವಿನೋಬನಗರ (Vinobanagar) ನಿವಾಸಿ ನಿಖಿಲ್ ಗೌಡ ಎಂಬುವವರು ಹಿರೋ ಸ್ಪ್ಲೆಂಡರ್ ಪ್ರೋ ಬೈಕ್ ಅನ್ನು ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಮೆರವಣಿಗೆ ಸಂಬಂಧ ಸಂಜೆ ಜೈಲ್ ವೃತ್ತದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ಇದ್ದುದ್ದರಿಂದ ಬೈಕ್ ಅನ್ನು ಆರ್.ಎಂ.ಎಸ್.ರಸ್ತೆಯಲ್ಲಿ ನಿಲ್ಲಿಸಿದ್ದು, ಊಟ ಮುಗಿಸಿಕೊಂಡು ವಾಪಸ್ ಹೋದಾಗ ಬೈಕ್ ಕಳ್ಳತನವಾಗಿತ್ತು. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ 2 | ಸೆಪ್ಟೆಂಬರ್ 5ರಂದು ಬೆಳಗ್ಗೆ ಅಬ್ದುಲ್ ನಾಸೀರ್ ಎಂಬುವವರು ಬಿ.ಎಚ್.ರಸ್ತೆಯ ರಾಯಲ್ ಆರ್ಕೆಡ್ ಹತ್ತಿರ ಹಿರೋ ಸ್ಪ್ಲೆಂಡರ್ ಪ್ರೋ ಬೈಕ್ ನಿಲ್ಲಿಸಿ ಗುಜರಿ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ ಬಂದು ನೋಡಲಾಗಿ ಬೈಕ್ ಕಳ್ಳತನವಾಗಿತ್ತು. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://suddikanaja.com/2022/09/18/forest-department-officials-raid-at-malalikoppa/