ಸುದ್ದಿ ಕಣಜ.ಕಾಂ | KARNATAKA | 07 OCT 2022
ಸಾಗರ(sagar): ಸಿಗಂದೂರು ರಸ್ತೆಯ ಆದಿಶಕ್ತಿ ನಗರದಲ್ಲಿ ಕಾರು ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕಿನಲ್ಲಿದ್ದ ದಂಪತಿ, ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದರು.
READ | ‘ವೃಷ್ಟಿ’ ಪೋಸ್ಟರ್ ರಿಲೀಸ್, ಏನಿದು ಚಿತ್ರ?
ಗಾಯಗೊಂಡವರನ್ನು ಆವಿನಹಳ್ಳಿ ಸಮೀಪದವರು ಎಂದು ತಿಳಿದುಬಂದಿದೆ. ಅವರನ್ನು ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೊಗ್ಗ ಮೂಲದವರು ಹೊಸ ಕಾರಿನಲ್ಲಿ ಸಿಗಂದೂರಿಗೆ ತೆರಳಿ ಪೂಜೆ ಸಲ್ಲಿಸಿ ಸಾಗರಕ್ಕೆ ವಾಪಸ್ ಬರುವಾಗ ಓವರ್ ಟೆಕ್ ಮಾಡಲು ಹೋದಾಗ ಘಟನೆ ನಡೆದಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://suddikanaja.com/2022/10/06/karnataka-state-natural-disaster-monitoring-centre-importent-notice/