ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರ ನಿಕಟವರ್ತಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ (Ayanur Manjunath) ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ (resignation ನೀಡುವ ಮಹತ್ವದ ಘೋಷಣೆಯನ್ನು ಮಾಡಿದ್ದು, ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ.
ನಗರದ ಮಥುರಾ ಪ್ಯಾರಡೈಸ್ (Mathura paradise) ನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ಶಾಸಕ ಕೆ.ಎಸ್.ಈಶ್ವರಪ್ಪರಾಗಲೀ ಅವರ ಮಗನಾಗಲೀ ನನ್ನ ವಿರುದ್ಧ ಸ್ಪರ್ಧಿಸುವಂತೆ ಪಂಥಾಹ್ವಾನ ನೀಡುತ್ತೇನೆ” ಎಂದು ಸವಾಲು ಹಾಕಿದರು.
ಬಿಜೆಪಿಯಲ್ಲಿ ನನಗೆ ಟಿಕೆಟ್ ಸಿಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ವಿಧಾನ ಪರಿಷತ್ ಸ್ಥಾನಕ್ಕೆ ಇನ್ನೂ ಎರಡ್ಮೂರು ದಿನಗಳಲ್ಲಿ ರಾಜೀನಾಮೆ ನೀಡಲಿದ್ದಾರೆ. ಸ್ಪರ್ಧೆ ಮಾಡಲೇಬೇಕೆಂದು ತೀರ್ಮಾನಿಸಿದ್ದೇನೆ. ನನ್ನು ನಿಲುವು ಮತ್ತು ಭಾವನೆಗಳನ್ನು ಪಕ್ಷದ ಮುಖಂಡರ ಗಮನಕ್ಕೆ ತಂದಿದ್ದೇನೆ. ಆಟೋ ಚಾಲಕರು, ಕಾರ್ಮಿಕರು, ಶ್ರಮಿಕರು ನನ್ನೊಂದಿಗಿದ್ದಾರೆ.
– ಆಯನೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ, ಶಿವಮೊಗ್ಗ
ಈಶ್ವರಪ್ಪ ಅವರು ಈ ಹಿಂದೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುವಾಗ ಏಕವಚನದಲ್ಲಿ ಮಾತನಾಡಿದ್ದಾರೆ. ಅದು ಅವರ ಶಿಕ್ಷಣ ಮತ್ತು ವಿವೇಚನಾ ಮಟ್ಟವನ್ನು ಸೂಚಿಸುತ್ತದೆ. ನಾಲಿಗೆಯ ಮೇಲೆ ಹಿಡಿತವಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗಿದೆ. ನಾನ್ಯಾವ ಲೆಕ್ಕ ಎನ್ನುವುದನ್ನು ಅವರಿಗೆ ತೋರಿಸುತ್ತೇನೆ” ಎಂದು ಕೆಂಡಾಮಂಡಲರಾದರು.
READ | ಚೆಕ್ ಪೋಸ್ಟ್’ನಲ್ಲಿ ಲಕ್ಷಾಂತರ ಮೌಲ್ಯದ ದಿನಸಿ ಬ್ಯಾಗ್, ರಗ್ಗು, ಜಮಖಾನಾ ಸೀಜ್
ಬಿಜೆಪಿಯಲ್ಲಿಯೇ ಎಸ್.ರುದ್ರೇಗೌಡ, ಸಿದ್ದರಾಮಣ್ಣ, ಭಾನುಪ್ರಕಾಶ್, ಗಿರೀಶ್ ಪಟೇಲ್, ಚನ್ನಬಸಪ್ಪ, ದತ್ತಾತ್ರಿ ಇನ್ನಿತರರಿದ್ದು, ಅವರಿಗೂ ಅವಕಾಶ ನೀಡಬಹುದಿತ್ತು. ಆದರೆ, ಈಶ್ವರಪ್ಪ ಅವರಿಗೆ ಪಕ್ಷಕ್ಕಿಂತ ಮಗನೇ ಹೆಚ್ಚಾಗಿದ್ದಾರೆ ಎಂದು ಆರೋಪಿಸಿದರು.
ಇತ್ತೀಚೆಗೆ ಶಿವಮೊಗ್ಗದಲ್ಲಿ 4.50 ಕೋಟಿ ರೂ. ಬೆಲೆ ಬಾಳುವ ಸೀರೆಗಳು ಮತ್ತು 1.30 ಕೋಟಿ ರೂ. ನಗದು ಸಿಕ್ಕಿದೆ. ಇಷ್ಟೊಂದು ಹಂಚಲು ಯಾರಿಗೆ ಶಕ್ತಿ ಇದೆ? ಎಂದು ಪರೋಕ್ಷವಾಗಿ ಈಶ್ವರಪ್ಪ ವಿರುದ್ಧ ಆರೋಪಿಸಿದರು.
Aynur manjunath | ಈಶ್ವರಪ್ಪ ವಿರುದ್ಧ ರೆಬೆಲ್ ಆದ ಆಯನೂರು ಮಂಜುನಾಥ್, ಫ್ಲೆಕ್ಸ್ ಮೂಲಕ ತೀಕ್ಷ್ಣ ಟೀಕೆ