ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದೆ. ಶನಿವಾರ ರಾತ್ರಿ ಇಡೀ ಮಳೆಯಾಗಿದ್ದು, ಭಾನುವಾರವೂ ಮುಂದುವರಿದೆ.
https://www.suddikanaja.com/2021/07/17/real-date-of-birth-of-tippu-sultan/
ಬೆಳಗ್ಗೆಯಿಂದ ರಚ್ಚೆ ಹಿಡಿದಿರುವ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದು, ವೀಕೆಂಡ್ ನಲ್ಲಿ ಜನ ಹೊರಗಡೆ ಬರುವುದಕ್ಕೂ ಹಿಂದೇಟು ಹಾಕುವಂತಾಗಿದೆ. ಸಲ್ಪ ಹೊತ್ತು ಸೋನೆಯಂತೆ ಸುರಿಯುವ ಮಳೆ ಏಕಾಏಕಿ ವೇಗ ಹೆಚ್ಚಿಸುತ್ತಿದೆ. ಇದರಿಂದಾಗಿ, ಮಳೆನಾಡಿಗೆ ಜೀವಕಳೆ ಬಂದಿದೆ.
ಶಿವಮೊಗ್ಗ ನಗರದಾದ್ಯಂತ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿದ್ದು, ಎಲ್ಲೆಂದರಲ್ಲಿ ಗುಂಡಿಗಳನ್ನು ತೋಡಲಾಗಿದೆ. ಅವುಗಳ ಮೇಲೆ ನೀರು ಆವೃತವಾಗಿದ್ದು, ವಾಹನ ಓಡಾಟಕ್ಕೂ ತೊಂದರೆ ಆಗುತ್ತಿದೆ. ಚೆನ್ನಾಗಿದ್ದ ಡಾಂಬಾರು ರಸ್ತೆಗಳನ್ನು ಅಗೆದು ಹಾಳು ಮಾಡಲಾಗಿದ್ದು, ರಸ್ತೆಗಳೆಲ್ಲ ಕೆರೆಗಳಾಗಿ ಮಾರ್ಪಟ್ಟಿವೆ.
ಇಂದು ಪುನರ್ವಸು ಕೊನೆ, ನಾಳೆಯಿಂದ ಪುಷ್ಯ | ಇಂದು ಪುನರ್ವಸು ಮಳೆಯ ಅಂತಿಮ ದಿನ. ನಾಳೆಯಿಂದ ಪುಷ್ಯ ಮಳೆ ಆರಂಭವಾಗಲಿದೆ.