ಸುದ್ದಿ ಕಣಜ.ಕಾಂ ತೀರ್ಥಹಳ್ಳಿ
THIRTHAHALLI: ಹಂದಿ ಬೇಟೆ ವೇಳೆ ನಾಡ ಬಂದೂಕಿನಿಂದ ಗುಂಡು ಹಾರಿ ವ್ಯಕ್ತಿಯೊಬ್ಬನ ಕಾಲಿಗೆ ಗಂಭೀರ ಗಾಯವಾಗಿದ್ದು, ಈ ಪ್ರಕರಣದಲ್ಲಿ ಆರೋಪಿಯನ್ನು ಭಾನುವಾರ ಬಂಧಿಸಲಾಗಿದೆ.
ತೀರ್ಥಹಳ್ಳಿ ತಾಲೂಕಿನ ದಾಸನಗದ್ದೆ ಗ್ರಾಮದ ರಾಜೇಶ್(30) ಎಂಬಾತನನ್ನು ಬಂಧಿಸಿ ಆತನ ಬಳಿಯಿಂದ ಪರವಾನಿಗೆ ಇಲ್ಲದ ಒಂದು ನಾಡ ಬಂದೂಕನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.
READ | ಆನಂದಪುರಂ- ಕುಂಸಿ ರೈಲ್ವೆ ನಿಲ್ದಾಣಗಳ ಮಧ್ಯೆ ವ್ಯಕ್ತಿ ಸಾವು, ಎಡಗೈಯಲ್ಲಿ ಹದ್ದಿನ ಚಿತ್ರ
ನಡೆದಿದ್ದೇನು?
ಇದೇ ತಿಂಗಳ 4ರಂದು ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದಾಸನಗದ್ದೆ– ಹಿರೆಗದ್ದೆ ಗ್ರಾಮದ ವಾಸಿಗಳಾದ ರಾಕೇಶ್(30) ಮತ್ತು ರಾಜೇಶ್ ಅವರು ಪರವಾನಿಗೆ ಇಲ್ಲದ ನಾಡ ಬಂದೂಕುಗಳನ್ನು ತೆಗೆದುಕೊಂಡು ಊರಿನ ಹತ್ತಿರದ ಕಾಡಿನಲ್ಲಿ ಹಂದಿ ಬೇಟೆಗೆಂದು ಹೋಗಿದ್ದಾರೆ. ಈ ಸಂದರ್ಭದಲ್ಲಿ ಹಂದಿಗೆ ಹೊಡೆಯಲು ರಾಜೇಶನು ತನ್ನ ಬಂದೂಕಿನಿಂದ ಹಾರಿಸಿದ ಗುಂಡು ರಾಕೇಶನ ಎಡಗಾಲಿನ ಮೊಣಕಾಲಿಗೆ ತಗುಲಿ ತೀವ್ರ ರಕ್ತ ಗಾಯವಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.
ಆರೋಪಿ ಪತ್ತೆ ಹಚ್ಚಿದ ತಂಡ
ಪ್ರಕರಣದ ಆರೋಪಿಯ ಪತ್ತೆಗೆ ಎಸ್.ಪಿ. ಮಿಥುನ್ ಕುಮಾರ್, ಹೆಚ್ಚುವರಿ ಎಸ್.ಪಿ ಅನಿಲ್ ಕುಮಾರ್ ಭೂಮರಡ್ಡಿ ಮಾರ್ಗದರ್ಶನದಲ್ಲಿ ತೀರ್ಥಹಳ್ಳಿ ಡಿವೈಎಸ್.ಪಿ ಗಜಾನನ ವಾಮನ ಸುತಾರ ಮೇಲ್ವಿಚಾರಣೆಯಲ್ಲಿ ತೀರ್ಥಹಳ್ಳಿ ಪೊಲೀಸ್ ಠಾಣೆ ಪಿಐ ಅಶ್ವತ್ಥ ಗೌಡ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
Milk adulterate | ಹಾಲಿನ ಕಲಬೆರಕೆ, ಸಚಿವರು ನೀಡಿದ ಪ್ರಮುಖ 5 ಸೂಚನೆಗಳೇನು?