ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಕಳೆದ ಆರು ತಿಂಗಳುಗಳಿಂದ ಪರಿಚಯವಾಗಿದ್ದ ವ್ಯಕ್ತಿಯು ಬಾಡಿಗೆಗಾಗಿ ಮೂರು ಕಾರುಗಳನ್ನು ಪಡೆದು ಪರಾರಿಯಾಗಿದ್ದು, ಆತನನ್ನು ಪೊಲೀಸರು ಗುರುವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿದ್ಯಾನಗರ ಅಮೃತ್ ಎಂಬುವವನನ್ನು ಬಂಧಿಸಲಾಗಿದೆ. ಆತನು ಬಾಡಿಗೆ ಪಡೆದಿದ್ದ ಒಂದು ಹೊಂಡ ಅಮೇಜ್ ಕಾರು ಮತ್ತು ಎರಡು ಟೊಯೋಟಾ ಇಟಿಯೋಸ್ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ನಡೆದಿದ್ದೇನು?
ಅಮೃತ್ ಆರು ತಿಂಗಳುಗಳ ಹಿಂದೆ ಪೆಸಿಟ್ ಕಾಲೇಜಿನಲ್ಲಿ ಡ್ರೈವಿಂಗ್ ಕೆಲಸ ಮಾಡುತ್ತಿರುವ ಬೊಮ್ಮನಕಟ್ಟೆ ನಿವಾಸಿ ಬಾಲ್ ರಾಜ್ ಎಂಬುವವರಿಗೆ ಪರಿಚಯವಾಗಿದ್ದಾನೆ. ಅಮೃತ್ ದಿನಕ್ಕೆ ?1,000 ಲೆಕ್ಕದಂತೆ ಕಾರನ್ನು ಬಾಡಿಗೆಗೆ ತೆಗೆದುಕೊಂಡು ಹೋಗುತಿದ್ದ. ವಾಪಸ್ ಬಂದ ಬಳಿಕ ಕಾರು ಮತ್ತು ಬಾಡಿಗೆ ಹಣವನ್ನು ಕೊಡುತ್ತಿದ್ದ.
ಬಾಡಿಗೆಯ ಕಾರುಗಳನ್ನು ನಗರದ ಈದ್ಗಾ ಮೈದಾನದಲ್ಲಿ ನಿಲುಗಡೆ ಮಾಡುತ್ತಿದ್ದರು. ಅಲ್ಲಿಂದಲೇ ನಿತ್ಯ ಬಾಡಿಗೆಗೆ ಕಳುಹಿಸುತಿದ್ದರು.
ಹೋದ ಕಾರುಗಳು ವಾಪಸ್ ಬರಲೇ ಇಲ್ಲ
ಸೆಪ್ಟೆಂಬರ್ 27ರಂದು ಬೆಳಗ್ಗೆ 7.20 ಗಂಟೆಗೆ ಅಮೃತ್ ಅವರು ಬಾಲ್ ರಾಜ್ ಬಳಿ ಬಂದು ಏರ್ಟೆಲ್ ಕಂಪೆನಿಯ ನೌಕರರನ್ನು ವಿವಿಧ ಸ್ಥಳಗಳಿಗೆ ಕರೆದುಕೊಂಡು ಹೋಗಲು ಕಾರಿನ ಅವಶ್ಯಕತೆ ಇದೆ ಎಂದು ಹೇಳಿದ್ದಾನೆ. ಆದರೆ, ಅಂದು ಅವರ ಕಾರು ರಿಪೇರಿಗೆ ಬಿಟ್ಟಿದ್ದರಿಂದ ನಾಗೇಶ್ ಎಂಬುವವರ ಟಯೋಟಾ ಇಟಿಯೋಸ್ ಕಾರನ್ನು ನೀಡಿದ್ದಾರೆ. ನಂತರ, 28ರಂದು ಬಾರಿಗೆಗೆ ಕಾರು ಬೇಕೆಂದು ಕೇಳಿದ್ದು ನವೀನ್ ಅವರ ಟಯೋಟಾ ಇಟಿಯೋಸ್ ಕಾರನ್ನು ಬಾಡಿಗೆಗೆ ನೀಡಿದ್ದಾರೆ. ಮತ್ತೆ ಅಕ್ಟೋಬರ್ 2ರಂದು ಬಾಡಿಗೆಗೆ ನೀಡಿದ್ದ ಕಾರಿನ ಸ್ವಲ್ಪ ಹಣವನ್ನು ನೀಡಿ ಮತ್ತೆ ಒಂದು ಕಾರು ಬಾಡಿಗೆಗೆ ಬೇಕೆಂದು ಕೇಳಿದ್ದಾರೆ. ಅದಕ್ಕಾಗಿ, ಕೃಷ್ಣಯ್ಯ ಶೆಟ್ಟಿ ಅವರ ಹೊಂಡಾ ಅಮೇಜ್ ಕಾರನ್ನು ಅಮೃತ್ ಅವರಿಗೆ ನೀಡಿದ್ದಾರೆ.
ಅಮೃತ್ ಮೂರು ಕಾರುಗಳನ್ನು ಬಾಡಿಗೆಗೆ ತೆಗೆದುಕೊಂಡು ಯಾವುದೇ ಬಾಡಿಗೆ ನೀಡದೇ ಕಾರನ್ನೂ ವಾಪಸ್ ಕೊಡದೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.
ದೂರು ನೀಡಿದ ಒಂದೇ ದಿನದಲ್ಲಿ ಆರೋಪಿ ಬಂಧನ
ಕಾರುಗಳನ್ನು ನೀಡದೇ ಪರಾರಿಯಾಗಿದ್ದ ಬಗ್ಗೆ ಬಾಲ್ ರಾಜ್ ಅವರು ಮಂಗಳವಾರ ಜಯ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಾರ್ಯಾಚರಣೆ ನಡೆಸಿದ ಪೊಲೀಸರು ಬುಧವಾರ ಆರೋಪಿಯನ್ನು ಬಂಧಿಸಿದ್ದಾರೆ. ಆತನಿಂದ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.
https://www.suddikanaja.com/2020/12/31/car-fraud-by-a-person-in-shivamogga-do-you-know-where-it-found/