ಸುದ್ದಿ ಕಣಜ.ಕಾಂ
ಶಿವಮೊಗ್ಗ: ರೌಡಿ ಮಂಜುನಾಥ್ ಭಂಡಾರಿಯನ್ನು ಕೊಲೆ ಮಾಡಿದ ಇಬ್ಬರು ಆರೋಪಿಗಳನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
ಬಸವನ ಗುಡಿಯ ಧ್ವಜ ಕಂಬದ ಬಳಿ ಕಳೆದ ಸೋಮವಾರ ರೌಡಿಯನ್ನು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ನ.11ರಂದು ಬಂಧಿಸಿ, ಕೃತ್ಯಕ್ಕೆ ಬಳಸಿದ ಆಯುಧ, ಒಂದು ದ್ವಿ ಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.
ಮರ್ಡರ್’ಗೇನು ಕಾರಣ: ಹಳೆ ವೈಷಮ್ಯ ಹಿನ್ನೆಲೆ ರೌಡಿ ಮಂಜುನಾಥ್ (32) ಎಂಬಾತನಿಗೆ ರೈಲ್ವೆ ಕ್ವಾರ್ಟರ್ಸ್ ನಿವಾಸಿ ಭವಿತ್ ಅಲಿಯಾಸ್ ಆಕಾಶ್(23) ಹಾಗೂ ಇಬ್ಬರು ಅಪ್ರಾಪ್ತ ಬಾಲಕರು ಸೇರಿ ಕೊಲೆ ಮಾಡಿದ್ದಾರೆ.
ಮಂಜುನಾಥ್ ಆರೋಪಿಗಳಿಗೆ ಹಣ ಕೊಡುವಂತೆ ಕಿರುಕುಳ ನೀಡುತ್ತಿದ್ದ. ಈ ಕಾರಣಕ್ಕಾಗಿ ಕೊಲೆ ಮಾಡಿರುವುದಾಗಿ ಬಂಧಿತರು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ.
ಕಾರ್ಯಾಚರಣೆ ನಡೆಸಿದ ತಂಡ: ಡಿವೈಎಸ್.ಪಿ ಉಮೇಶ್ ಈಶ್ವರ್ ನಾಯ್ಕ ಮಾರ್ಗದರ್ಶನದಲ್ಲಿ ಕೋಟೆ ಪೊಲೀಸ್ ಠಾಣೆ ಸಿಪಿಐ ಟಿ.ಕೆ. ಚಂದ್ರಶೇಖರ್ ನೇತೃತ್ವದಲ್ಲಿ ಜಯನಗರ ಪಿಎಸ್.ಐ ರಾಹತ್ ಅಲಿ, ಕೋಮಲಾ, ಸಂತೋಷ್ ಭಾಗೋಜಿ, ಶಿಲ್ಪ, ಸೋಮು, ಸುಧಾಕರ್, ಮೋಹನ್, ಪರಮೇಶ್ ನಾಯ್ಕ, ರಾಮಕೃಷ್ಣ, ಪ್ರಕಾಶ್, ಆದರ್ಶ, ಶಿವರಾಜ್ ನಾಯ್ಕ, ಚಂದನ್, ಮೋಹನ್, ರವಿ ನಾಯ್ಕ, ಮುಸ್ತಫಾ, ಮಂಜುನಾಥ್ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದೆ.