ಸುದ್ದಿ ಕಣಜ.ಕಾಂ
ಶಿವಮೊಗ್ಗ: ಆರ್ಯ ಈಡಿಗ ಜನಾಂಗದ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ರಚಿಸಬೇಕೆಂದು ಶಿವಮೊಗ್ಗ ಜಿಲ್ಲಾ ಬ್ರಹ್ಮಶ್ರೀ ನಾರಾಯಣಗುರು ಆರ್ಯ ಈಡಿಗ ಮಹಿಳಾ ಸಂಘ ಆಗ್ರಹಿಸಿದೆ.
ಆರ್ಯ ಈಡಿಗ ಜನಾಂಗವು 26 ಉಪ ಜಾತಿಗಳನ್ನು ಒಳಗೊಂಡಿದ್ದು, ರಾಜ್ಯದಲ್ಲಿ 20 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದೆ. ಆದರೆ, ಜನಾಂಗದ ಮುಖ್ಯ ಕಸುಬುಗಳಾದ ಸಾರಾಯಿ, ಸೇಂದಿ ಮಾರಾಟ ನಿಷೇಧ ಮಾಡಿದ್ದರಿಂದ ಜನಾಂಗದ ಅನೇಕ ಕುಟುಂಬಗಳು ಬೀದಿಗೆ ಬಿದ್ದಿವೆ. ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಹಿಂದುಳಿವೆ ಎಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಸಂಘದ ಗೌರವಾಧ್ಯಕ್ಷೆ ರೀತಾ ಪೂಜಾರಿ, ಅಧ್ಯಕ್ಷೆ ಗೀತಾಂಜಲಿ ದತ್ತಾತ್ರೇಯ, ಸಾವಿತ್ರಮ್ಮ ಶಿವಪ್ಪ, ಲಲಿತಾ ಹೊನ್ನಪ್ಪ, ಪ್ರೇಮಾ ವಿಜೇಂದ್ರ, ಸರಸಾ ಪದ್ಮನಾಭ್, ವೀಣಾ ವೆಂಕಟೇಶ್, ಶೋಭಾ ಮೋಹನ್, ಪ್ರಭಾವತಿ ಮಡೆನೂರ್, ಪುಷ್ಪಲತಾ ಮೂರ್ತಿ ಉಪಸ್ಥಿತರಿದ್ದರು.