ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋಮು ಗಲಭೆಯಿಂದಾಗಿ ಕಾದು ಕಾವಲಿಯಾಗಿದ್ದ ಶಿವಮೊಗ್ಗ ಪೊಲೀಸರ ಬಿಗಿ ಭದ್ರತೆಯಿಂದಾಗಿ ಪೂರ್ವ ಸ್ಥಿತಿಗೆ ಬಂದಿದೆ. ಸಹಜವಾಗಿಯೇ ಭಾನುವಾರಗಳಂದು ಇರುವ ಜನದಟ್ಟಣೆ ನಗರದಲ್ಲಿ ಇರಲಿಲ್ಲ. ಎಲ್ಲ ಅಂಗಡಿಗಳು ಬಂದ್ ಇದ್ದ ಕಾರಣಕ್ಕೆ ಖರೀದಿಗೆ ಜನ ಹೊರಗೆ ಬರಲಿಲ್ಲ. ಹೀಗಾಗಿ, ಜನಸಂಚಾರ ಕಡಿಮೆ ಇತ್ತು. ಆದರೆ, ಗಾಂಧಿ ಬಜಾರ್ ಸುತ್ತಮುತ್ತ ಸಂಭವಿಸಿದ ಅಹಿತಕರ ಘಟನೆಯಿಂದಾಗಿ ಜನ ಕಳೆದರೆಡು ದಿನಗಳಿಂದ ಹೊರಗೆ ಬರುವುದಕ್ಕೆ ಭಯಗೊಂಡಿದ್ದರು. ಆದರೀಗ, ಸ್ಥಿತಿ ನಿಯಂತ್ರಣದಲ್ಲಿದೆ.
ಎಎ ಸರ್ಕಲ್ ಇನ್ನೂ ಲಾಕ್: ಅಮೀರ್ ಅಹ್ಮದ್ ವೃತ್ತದಲ್ಲಿ ಈಗಲೂ ಪೊಲೀಸರ ಸರ್ಪಗಾವಲಿದೆ. ಗಾಂಧಿ ಬಜಾರ್ ನಲ್ಲೂ ಯಾರಿಗೂ ಪ್ರವೇಶಿಸುವುದಕ್ಕೆ ಬಿಡುತ್ತಿಲ್ಲ. ಎಎ ವೃತ್ತದಿಂದ ಓ.ಟಿ. ರಸ್ತೆಗೆ ಹೋಗುವ ದಾರಿಯಲ್ಲಿ ಪ್ರವೇಶ ನಿಷೇಧಿಸಲಾಗಿದೆ. ಪೊಲೀಸರು ಗಸ್ತು ಮುಂದುವರಿದೆ.