ಸುದ್ದಿ ಕಣಜ.ಕಾಂ
ಭದ್ರಾವತಿ/ಶಿವಮೊಗ್ಗ: ದೇವಾಂಗ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಕಚೇರಿ ಎದುರು ಶನಿವಾರ ಪ್ರತಿಭಟನೆ ಮಾಡಲಾಯಿತು.
ರಾಜ್ಯದಲ್ಲಿ ಅಂದಾಜು 30 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ದೇವಾಂಗ ಸಮಾಜಕ್ಕೆ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಇಲ್ಲದಿದ್ದರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿರುದ್ಧ ಹೋರಾಟ ಮಾಡಲಾವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
ಆಂಧ್ರ ಪ್ರದೇಶದಲ್ಲಿ 6 ಲಕ್ಷ ಜನಸಂಖ್ಯೆ ಇದ್ದು, ಅಲ್ಲಿ ನಿಗಮ ಸ್ಥಾಪನೆ ಮಾಡಿದೆ. ಅದೇ ರೀತಿ, ಬೇರೆ ರಾಜ್ಯಗಳಲ್ಲೂ ನಿಗಮ ಸ್ಥಾಪಿಸಲಾಗಿದೆ. ಕರ್ನಾಟಕದಲ್ಲೂ ಸ್ಥಾಪಿಸಿ, 500 ಕೋಟಿ ರೂಪಾಯಿ ಮಂಜೂರು ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಹೊಸದುರ್ಗದಲ್ಲಿ ದೇವಾಂಗ ಸಮಾಜದ ಸಮಾವೇಶ ಸದ್ಯದಲ್ಲೇ ಮಾಡಲಾಗುವುದು. ಬಳಿಕ ಶಿವಮೊಗ್ಗದಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗುವುದು.
– ಎಂ.ಪ್ರಭಾಕರ್, ಜಿಲ್ಲಾ ಸಂಚಾಲಕ
ಹೋರಾಟ ಸಮಿತಿ ಅಧ್ಯಕ್ಷ ಧರ್ಮಪಾಲಾಕ್ಷಪ್ಪ, ಸಮಾಜದ ಮುಖಂಡರಾದ ಡಿ.ಎ.ವೇಣು, ಆಂಜನೇಯ, ಬಿ.ಕೆ.ಚಂದ್ರಪ್ಪ, ಡಿ.ನಾಗರಾಜ್, ಕೃಷ್ಣಮೂರ್ತಿ, ವೆಂಕಟೇಶ್ ಉಪಸ್ಥಿತರಿದ್ದರು. ತಹಸೀಲ್ದಾರ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ.
ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ರಾಜ್ಯ ದೇವಾಂಗ ಅಭಿವೃದ್ಧಿ ನಿಗಮ ಸಹ ಸಂಚಾಲಕರಾದ ಪಿ.ಆರ್.ಗಿರಿಯಪ್ಪ, ಟಿ.ರಾಜೇಶ್, ಜಿಲ್ಲಾ ಸಂಚಾಲಕ ಎಂ.ಪ್ರಭಾಕರ್, ನಗರ ದೇವಾಂಗ ಸಮಾಜದ ಅಧ್ಯಕ್ಷ ಬಿ.ಸತೀಶ್ ಕುಮಾರ್, ಎಂ.ಕಾಂತರಾಜ್, ಸುಲೋಚನ ಶಂಕರಮೂರ್ತಿ ಉಪಸ್ಥಿತರಿದ್ದರು.