ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಎಸ್.ಸಿ, ಎಸ್.ಟಿ ಕುಂದು ಕೊರತೆ ಸಭೆಯಲ್ಲಿ ಅಕ್ರಮ ಗಣಿಗಾರಿಗೆ ವಿಚಾರದ ಕುರಿತ ಆರೋಪಗಳು ಕೇಳೀಬಂದವು.
ಹುಣಸೋಡು ಘಟನೆಯ ನಂತರ ಜಾಗೃತರಾಗಿರುವ ಪೊಲೀಸರು ವಿವಿಧೆಡೆ ದಾಳಿ ನಡೆಸುತ್ತಿದ್ದು, ಇದರಲ್ಲಿ ಅಮಾಯಕರು ಕಷ್ಟಪಡುತ್ತಿದ್ದಾರೆ. ಗಣಿಗಾರಿಕೆಯಲ್ಲಿ ಕೆಲಸ ಮಾಡುವ ಕಾರ್ಮಿಕರ ಮೇಲೆ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಅಕ್ರಮ ಗಣಿಗಾರಿಕೆ ಮಾಲೀಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕಲ್ಲಗಂಗೂರು ಗ್ರಾಮಸ್ಥರೊಬ್ಬರು ಆರೋಪಿಸಿದರು.
ಹುಣಸೋಡು ಜನರ ಗೋಳನ್ನು ಕೇಳಿ | ಹುಣಸೋಡು ಗ್ರಾಮದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದ ಬಳಿಕ ಅಲ್ಲಿಗೆ ಮುಖ್ಯಮಂತ್ರಿಗಳು ಸೇರಿ ಸಚಿವರು, ಶಾಸಕರು ಭೇಟಿ ನೀಡಿದ್ದಾರೆ. ಆದರೆ, ಸ್ಫೋಟದಿಂದಾಗಿ ಹುಣಸೋಡು ಗ್ರಾಮದ ಎಸ್.ಸಿ, ಎಸ್.ಟಿ ಜನಾಂಗದವರ ಮನೆಗಳು ಹಾಳಾಗಿವೆ ಎಂದು ಸ್ಥಳೀಯರೊಬ್ಬರು ಆರೋಪಿಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಚ್.ಟಿ.ಶೇಖರ್ ಉಪಸ್ಥಿತರಿದ್ದರು.
ಕೇಳಿಬಂದ ಆರೋಪಗಳೇನು?
- ಗೋಪಾಳದಲ್ಲಿ ದುಷ್ಕರ್ಮಿಗಳು ಕುಡಿದು ರಸ್ತೆಯ ಮೇಲೆ ಗಾಜು ಪುಡಿಪುಡಿ ಮಾಡುತ್ತಿದ್ದಾರೆ. ಇದರಿಂದಾಗಿ ಶಾಲಾ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ವಾಹನಗಳು ಪಂಕ್ಚರ್ ಆಗುತ್ತಿವೆ.
- ಪ್ರಯಾಣಿಕರು ನಿತ್ಯ ಸಂಚರಿಸಲು ಖಾಸಗಿ ಬಸ್ ಗಳನ್ನೇ ಅವಲಂಬಿಸಿದ್ದಾರೆ. ಆದರೆ, ಅಲ್ಲಿ ಏಜೆಂಟರ ಹಾವಳಿ ಹೆಚ್ಚಾಗಿದೆ.
ಎಸ್.ಸಿ, ಎಸ್.ಟಿ ಕಾಲೊನಿಗೆ ಪೊಲೀಸ್ ಬೀಟ್ ಕೊಡಿ | ಎಸ್ಸಿ, ಎಸ್ಟಿ ಕಾಲೊನಿಗಳಲ್ಲಿ ದುಷ್ಕರ್ಮಿಗಳ ಉಪಟಳ ಹೆಚ್ಚಿದೆ. ಅದಕ್ಕಾಗಿ, ಪೆÇಲೀಸ್ ಇಲಾಖೆಯಿಂದ ಬೀಟ್ ವ್ಯವಸ್ಥೆ ಮಾಡಿ ಎಂದು ಸಭೆಗೆ ಆಗಮಿಸಿದ ಮುಖಂಡರು ಆಗ್ರಹಿಸಿದರು.
ಕುಂದು ಕೊರತೆಗಳನ್ನು ಹೇಳಿಕೊಳ್ಳುವುದಕ್ಕೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಎರಡನೇ ಶನಿವಾರ ಸಭೆ ನಡೆಸಲಾಗುವುದು.
– ಕೆ.ಎಂ.ಶಾಂತರಾಜು, ಎಸ್.ಪಿ., ಶಿವಮೊಗ್ಗ
ಶಿಕಾರಿಪುರದಲ್ಲಿ ಹೆಚ್ಚಿದ ಮೀಟರ್ ಬಡ್ಡಿ | ಶಿಕಾರಿಪುರ ತಾಲೂಕಿನಲ್ಲಿ ಮೀಟರ್ ಬಡ್ಡಿ ವ್ಯವಹಾರ ಹೆಚ್ಚಾಗಿದೆ. ಸಾಲಕ್ಕಾಗಿ ಜಮೀನಿನ ಕಾಗದಗಳನ್ನು ಪಡೆಯಲಾಗುತ್ತಿದೆ. ರೈತರು ಸಾಲದಲ್ಲಿ ಸಿಲುಕುತ್ತಿದ್ದಾರೆ ಎಂದು ಆರೋಪಿಸಲಾಯಿತು.