ಸುದ್ದಿ ಕಣಜ.ಕಾಂ
ಶಿವಮೊಗ್ಗ: ಪರಿಸರ ಮತ್ತು ವನ್ಯಜೀವಿಗಳ ಸೂಕ್ಷ್ಮ ಪ್ರದೇಶವಾದ ಆಗುಂಬೆಯಲ್ಲಿ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.
ಆಗುಂಬೆ ಘಾಟಿ ಅಪರೂಪದ ಪ್ರಾಣಿ ಸಿಂಗಳಿಕ (ಎಲ್.ಟಿ.ಎಂ) ಸೇರಿದಂತೆ ಹಲವು ಪ್ರಾಣಿಗಳನ್ನು ತನ್ನಲ್ಲಿ ಆಶ್ರಯ ನೀಡಿದೆ. ಆದರೆ, ಪ್ರವಾಸಿಗರು ಈ ಪ್ರಾಣಿ, ಪಕ್ಷಿಗಳಿಗೆ ಸೇವಿಸುವುದಕ್ಕೆ ಆಹಾರ ನೀಡುವ ಮೂಲಕ ಅವುಗಳ ನೈಸರ್ಗಿಕ ಗುಣ ಧರ್ಮವನ್ನೇ ಕಸಿದುಕೊಳ್ಳುತ್ತಿದ್ದಾರೆ. ಇದು ಅವುಗಳ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತಿದೆ.
10 ಕಿ.ಮೀ.ಗೆ 40 ಸಿಬ್ಬಂದಿ ನಿಯೋಜನೆ | ಆಗುಂಬೆ ಘಾಟಿಯುದ್ದಕ್ಕೂ ಪ್ರಾಣಿಗಳಿಗೆ ಆಹಾರ ನೀಡುವುದು ನಿಷಿದ್ಧ ಎಂಬ ಫಲಕಗಳನ್ನೇನೋ ಹಾಕಲಾಗಿದೆ. ಆದರೆ, ಪ್ರವಾಸಿಗರು ಇದರೆಡೆಗೆ ಗಮನವೇ ಹರಿಸುತ್ತಿರಲಿಲ್ಲ. ಈ ಎಲ್ಲ ಅಂಶಗಳನ್ನು ಮನಗಂಡು ಅರಣ್ಯ ಇಲಾಖೆಯ ಕಾರ್ಕಳ ವನ್ಯಜೀವಿ ವಿಭಾಗವು ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯ ಆಗುಂಬೆ ಘಾಟಿಯಲ್ಲಿ ಇದನ್ನು ನಿಗ್ರಹಿಸುವುದಕ್ಕಾಗಿಯೇ 40 ಸಿಬ್ಬಂದಿಯನ್ನು ನಿಯೋಜಿಸಿದೆ.
ಇದನ್ನೂ ಓದಿ । ಕೆ ಸೆಟ್ ಪರೀಕ್ಷೆಗೆ ಮುಹೂರ್ತ ಫಿಕ್ಸ್, ಯಾವಾಗ ನಡೆಯಲಿದೆ ಪರೀಕ್ಷೆ ಇಲ್ಲಿದೆ ಮಾಹಿತಿ
ಸೋಮೇಶ್ವರದಿಂದ ಆಗುಂಬೆವರೆಗಿನ 10 ರಸ್ತೆಯುದ್ದಕ್ಕೂ ಹೆಬ್ರಿ, ಕಾರ್ಕಳ, ಅಮಾಸೆಬೈಲು ಮತ್ತು ಸಿದ್ದಾಪುರ ವನ್ಯಜೀವಿ ವಿಭಾಗದ 40 ಸಿಬ್ಬಂದಿಯನ್ನು ಪ್ರವಾಸಿಗರ ಮೇಲೆ ಕಣ್ಣಿಡಲು ನಿಯೋಜಿಸಲಾಗಿದೆ.
ಯಾವುದಕ್ಕೆಷ್ಟು ದಂಡ | ರಸ್ತೆ ಬದಿ ಪ್ಲಾಸ್ಟಿಕ್, ತ್ಯಾಜ್ಯ ಎಸೆದರೆ 100 ರೂಪಾಯಿ, ಪೂರ್ವಾನುಮತಿ ಪಡೆಯದೇ ಅರಣ್ಯ ಪ್ರವೇಶ, ಜಲಪಾತಗಳಲ್ಲಿ ಸ್ನಾನ, ವಾಹನಗಳನ್ನು ತೊಳೆಯುವುದು, ಅಡುಗೆ ತಯಾರಿಕೆ ಮತ್ತಿತರ ಅಪರಾಧಗಳಿಗೆ 200 ರೂಪಾಯಿ ಹಾಗೂ ಪ್ರಾಣಿಗಳಿಗೆ ತಿಂಡಿ, ತಿನಿಸು ನೀಡಿದರೆ 50 ರೂಪಾಯಿ ದಂಡ ವಿಧಿಸಲಾಗುವುದು.
ಈಗಾಗಲೇ ಹಲವರಿಗೆ ದಂಡದೇಟು | ಈಗಾಗಲೇ ರಸ್ತೆಯ ಬದಿಯಲ್ಲಿ ಆಹಾರ ಎಸೆದ ಮೂವರಿಂದ ದಂಡ ವಸೂಲಿ ಮಾಡಲಾಗಿದೆ.