ಸುದ್ದಿ ಕಣಜ.ಕಾಂ
ತೀರ್ಥಹಳ್ಳಿ: ತಾಲೂಕಿನ ಮಾಳೂರು ಸಮೀಪ ಗುರುವಾರ ರಾತ್ರಿ ಮರವೊಂದಕ್ಕೆ ಬೈಕ್ ಸವಾರ ಡಿಕ್ಕಿ ಹೊಡೆದ ಪರಿಣಾಮ ಆತ ಮೃತಪಟ್ಟಿದ್ದಾನೆ.
ಇದನ್ನೂ ಓದಿ | ಮಲೆನಾಡ ಪ್ರವಾಸೋದ್ಯಮಕ್ಕೆ ಡಿಜಿಟಲ್ ಟಚ್!
ಮೃತ ವ್ಯಕ್ತಿಯನ್ನು ಬೆಂಗಳೂರಿನ ಜಾನ್ ಸ್ಟಿಫನ್(37) ಎಂದು ಪತ್ತೆ ಹಚ್ಚಲಾಗಿದೆ. ಕೃಷಿ ಕಂಪೆನಿಯೊಂದರ ಉತ್ಪನ್ನ ಮಾರಾಟದ ಪ್ರತಿನಿಧಿಯಾಗಿ ತಾಲೂಕಿಗೆ ಅಗಮಿಸಿದ್ದರು. ವಾರದ ಹಿಂದಷ್ಟೇ ಆಗಮಿಸಿದ ಜಾನ್ ಮೃತಪಟ್ಟಿದ್ದಾರೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.