ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸಾರಿಗೆ ನೌಕರರ ಮುಷ್ಕರ ಯುಗಾದಿ ಮಾರನೇ ದಿನವಾದ ಬುಧವಾರವೂ ಮುಂದುವರಿದಿದೆ. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಗಳ ಕಾರುಬಾರು ಮುಂದುವರಿದಿದೆ.
READ |ಜನರ ಆಕ್ರೋಶಕ್ಕೆ ಕಾರಣವಾದ ಶಿವಮೊಗ್ಗ ಮಹಾನಗರ ಪಾಲಿಕೆ ನಿರ್ಧಾರ
ಸರ್ಕಾರ ಮುಷ್ಕರವನ್ನು ಹತ್ತಿಕ್ಕುವ ದೃಷ್ಟಿಕೋನದಿಂದ ನೌಕರರ ಮುಖಂಡರ ವಿರುದ್ಧ ವರ್ಗಾವಣೆ ಅಸ್ತ್ರ ಬಳಸಿತ್ತು. ಅದೂ ಸಹ ಠುಸ್ ಆಗಿದೆ. ವರ್ಗಾವಣೆಯ ಬಳಿಕವೂ ನೌಕರರು ಮುಷ್ಕರ ಮುಂದುವರಿಸಿದ್ದು, ಕರ್ತವ್ಯಕ್ಕೆ ಹಾಜರು ಆಗಿಲ್ಲ.
ಖಾಸಗಿ ಬಸ್ ಕಾರ್ಯನಿರ್ವಹಣೆ | ಕೆ.ಎಸ್.ಆರ್.ಟಿ.ಸಿ ನೌಕರರ ಪ್ರತಿಭಟನೆಯಿಂದಾಗಿ ಜನರಿಗೆ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಸರ್ಕಾರ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಿಂದಲೇ ಖಾಸಗಿ ಬಸ್ ಕಾರ್ಯನಿರ್ವಹಣೆಗೆ ಅವಕಾಶ ನೀಡಿದೆ. ಅದರಂತೆ, ಶಿವಮೊಗ್ಗ ಜಿಲ್ಲೆಯಾದ್ಯಂತ ಖಾಸಗಿ ಬಸ್ ಗಳ ಸಂಚಾರಕ್ಕೆ ಯಾವುದೇ ಬರವಿಲ್ಲ. ಕೆಲವು ಸರ್ಕಾರಿ ಬಸ್ ಮಾತ್ರ ಸಂಚರಿಸುತ್ತಿವೆ. ಪ್ರಯಾಣಿಕರ ಸಂಖ್ಯೆ ನಿತ್ಯಕ್ಕಿಂತ ಕಡಿಮೆ ಇದೆ.