ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೆ.ಎಸ್.ಆರ್.ಟಿ.ಸಿ. ನೌಕರರ ಮುಷ್ಕರ ಹಿಂಪಡೆಯುತ್ತಿದ್ದಂತೆ ಶಿವಮೊಗ್ಗ ವಿಭಾಗದಲ್ಲಿ ಬಸ್ ಸಂಚಾರ ಆರಂಭವಾಗಿದೆ.
READ | ಸಾರಿಗೆ ನೌಕರರ ಮುಷ್ಕರ ತಾತ್ಕಾಲಿಕ ವಾಪಸ್, ಇಂದಿನಿಂದ ಯಾವ ಮಾರ್ಗಕ್ಕೆ ಬಸ್ ಸೇವೆ ಲಭ್ಯವಿದೆ?
ಶೇ.30ರಷ್ಟು ಮಾತ್ರ ಪ್ರಯಾಣಿಕರು | ಬಸ್ ನಿಲ್ದಾಣದಲ್ಲಿ ಬೆಳಗ್ಗೆಯಿಂದಲೇ ಸಾಕಷ್ಟು ಜನರ ಓಡಾಟ ಇರುತಿತ್ತು. ಆದರೆ, ಬಸ್ ಗಳ ಸಂಚಾರ ಇರಲಿದೆಯೇ ಎಂಬ ಅನುಮಾನ, ಕೋವಿಡ್ ಸೋಂಕು ಹರಡುತ್ತಿರುವುದರಿಂದ ಹಾಗೂ ನೈಟ್ ಕಫ್ರ್ಯೂ ಹಿನ್ನೆಲೆ ನಿರೀಕ್ಷಿತ ಸಂಖ್ಯೆಯಲ್ಲಿ ಪ್ರಯಾಣಿಕರು ಇರಲಿಲ್ಲ. ಬಸ್ ನಿಲ್ದಾಣಕ್ಕೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಶೇ.30ರಷ್ಟು ಮಾತ್ರ ಜನರಿದ್ದಾರೆ. ಈ ಕಾರಣದಿಂದಾಗಿ ಎಲ್ಲ ಬಸ್ ಗಳನ್ನು ನಿಲ್ದಾಣಕ್ಕೆ ತಂದಿಲ್ಲ. ಒಂದುವೇಳೆ, ಬೇಡಿಕೆ ಸೃಷ್ಟಿಯಾದಂತೆ ಬಸ್ ಪೂರೈಸುವುದಾಗಿ ಸಾರಿಗೆ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.
ಖಾಸಗಿಯವರ ಪೂರ್ಣ ಸಹಕಾರ | ಕಳೆದ 15 ದಿನಗಳಿಂದ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ ಅಕ್ಷರಶಃ ಖಾಸಗಿ ಬಸ್ ಗಳಿಂದ ಆವೃತಗೊಂಡಿದ್ದವು. ಗುರುವಾರ ಬೆಳಗ್ಗೆ ಸಹ ಖಾಸಗಿ ಬಸ್ ಗಳು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರು ನಿಂತಿದ್ದವು. ಆದರೆ, ಸಾರಿಗೆ ಸಂಸ್ಥೆ ಸಿಬ್ಬಂದಿ ಅವರಿಗೆ ಮನವಿ ಮಾಡಿದ ನಂತರ ಅಲ್ಲಿಂದ ಬಸ್ ಗಳನ್ನು ಖಾಸಗಿ ನಿಲ್ದಾಣದ ಕಡೆಗೆ ತೆಗೆದುಕೊಂಡು ಹೋಗಲಾಯಿತು.
https://www.suddikanaja.com/2020/12/14/bus-operating-started-from-shivamogga/