ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸಾಗುವಾನಿ ಮರಗಳನ್ನು ಕಡಿತಲೆ ಮಾಡಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.
READ | ಹಾಲು, ತರಕಾರಿ, ದಿನಸಿ ಖರೀದಿಯ ಸಮಯ ಬದಲಾಯಿಸಿ ಆದೇಶ, ಮೇ 2ರಿಂದ ಅನ್ವಯ
ಭಾರತಿ ನಗರ ನಿವಾಸಿ ಮಂಜ ಎಂಬಾತನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯ ಪುರದಾಳು ಮೀಸಲು ಅರಣ್ಯವಾದ ಕರಡಿಮಟ್ಟಿಯಲ್ಲಿ ಸಾಗುವಾನಿ ಮರಗಳನ್ನು ಕಡಿದು ಮಾರಾಟಕ್ಕಾಗಿ ಸಾಗಿಸಲಾಗುತಿತ್ತು. ಆಗ ಸಿಬ್ಬಂದಿ ದಾಳಿ ನಡೆಸಿದ್ದಾರೆ.
ಭೋವಿ ಕಾಲೊನಿಯ ರಾಜಾ, ಭಾರತಿ ನಗರದ ತಿರುಪತಿ ಎಂಬುವವರು ತಲೆ ಮರೆಸಿಕೊಂಡಿದ್ದಾರೆ. ಇವರ ಹುಡುಕಾಟ ನಡೆಯುತ್ತಿದೆ.
ಕಾರ್ಯಾಚರಣೆಯಲ್ಲಿ ಅರಣ್ಯಾಧಿಕಾರಿ ಕೃಪಾಸಾಗರ್, ಲಿಂಬು ಚವ್ಹಾಣ್, ಸಲೀಮ್, ಸಂತೋಷ್, ಸುನೀಲ್ ಎಂಬುವವರು ಪಾಲ್ಗೊಂಡಿದ್ದರು.