ಸುದ್ದಿ ಕಣಜ.ಕಾಂ
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಮತ್ತು ನಿವೃತ್ತಿ ವೇತನದಾರರಿಗೆ ಲಭ್ಯವಿರುವ ತುಟ್ಟಿ ಭತ್ಯೆ (ಡಿಎ) ದರಗಳನ್ನು ಜೂನ್ 2021ರ ವರೆಗೆ ಸ್ಥಗಿತಗೊಳಿಸಲು ಆದೇಶಿಸಲಾಗಿದೆ.
ಯುಜಿಸಿ, ಐಸಿಎಆರ್, ಎಐಸಿಟಿಇ ವೇತನ ಶ್ರೇಣಿಗಳ ನೌಕರರು ಮತಮ್ತು ಎನ್ಜೆಪಿಸಿ ವೇತನ ಶ್ರೇಣಿಯ ನ್ಯಾಯಾಂಗ ಅಧಿಕಾರಿಗಳೂ , ನಿವೃತ್ತ ನ್ಯಾಯಾಂಗ ಅಧಿಕಾರಿಗಳನ್ನೂ ಒಳಗೊಂಡಂತೆ ಆರ್ಥಿಕ ಇಲಾಖೆ ಸರ್ಕಾರದ ಉಪ ಕಾರ್ಯದರ್ಶಿ ಡಿ.ಎಸ್.ಜೋಗೋಜೆ ಆದೇಶದಲ್ಲಿ ತಿಳಿಸಿದ್ದಾರೆ.
https://www.suddikanaja.com/2021/02/24/demands-submitted-to-cm-bs-yadiyurappa-from-cs-shadakshari/
ನೌಕರರು ಮತ್ತು ಪಿಂಚಣಿದಾರರನ್ನು ಒಳಗೊಂಡಂತೆ ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ 2020ರ ಜನವರಿ 1ರಿಂದ ಜಾರಿಗೆ ಬರುವಂತೆ ಲಭ್ಯವಿರುವ ತುಟ್ಟಿ ಭತ್ಯೆಯ ಹೆಚ್ಚುವರಿ ಕಂತುಗಳನ್ನು ಪಾವತಿಸಕ್ಕದ್ದಲ್ಲ. 2020ರ ಜುಲೈ 1 ಮತ್ತು 2021 ಜನವರಿ 1ರಿಂದ ಲಭ್ಯವಿರುವ ಅಥವಾ ಲಭ್ಯವಾಗಬಹುದಾದ ತುಟ್ಟಿ ಭತ್ಯೆಯ ಹೆಚ್ಚುವರಿ ಕಂತುಗಳನ್ನು ಸಹ ಮುಂದಿನ ಆದೇಶಗಳವರೆಗೆ ಬಿಡುಗಡೆ ಮಾಡತಕ್ಕದ್ದಲ್ಲ. ಆದರೆ, ಚಾಲ್ತಿಯಲ್ಲಿರುವ ಡಿಎ ದರಗಳು ಮುಂದುವರಿದು ಅನ್ವಯಿಸುತ್ತದೆ ಎಂದು ತಿಳಿಸಿದ್ದಾರೆ.
2021ರ ಜುಲೈ 1ರಿಂದ ಲಭ್ಯವಿರುವ ತುಟ್ಟಿ ಭತ್ಯೆಯ ಮುಂದಿನ ಹೆಚ್ಚುವರಿ ಕಂತುಗಳನ್ನು ಬಿಡುಗಡೆ ಮಾಡುವ ಸಂಬಂಧ ಕೇಂದ್ರ ಸರ್ಕಾರವು ನಿರ್ಧಾರ ತೆಗೆದುಕೊಂಡಲ್ಲಿ 2020ರ ಜನವರಿ 1, ಜುಲೈ 1 ಮತ್ತು 2021ರ ಜನವರಿ 1ರಿಂದ ಅನ್ವಯಿಸುವ ತುಟ್ಟಿ ಭತ್ಯೆ ದರಗಳನ್ನು ಭವಿಷ್ಯಾವರ್ತಿಯಾಗಿ ಪುನರ್ ಸ್ಥಾಪಿಸಲಾಗುವುದು. ಇದು 2021ರಿಂದ ಜುಲೈ 1ರಿಂದ ಅನ್ವಯವಾಗುವ ಕ್ರೋಡೀಕೃತ ದರದಲ್ಲಿ ವಿಲೀನಗೊಳ್ಳುತ್ತದೆ. 2020 ಜನವರಿ 1ರಿಂದ 2021ರ ಜೂನ್ 21ರ ವರೆಗೆ ತುಟ್ಟಿ ಭತ್ಯೆ ಬಾಕಿಯನ್ನು ಪಡೆಯಲು ನೌಕರರು ಮತ್ತು ನಿವೃತ್ತಿ ವೇತನದಾರರು ಅರ್ಹರಿರುವುದಿಲ್ಲ ಎಂದು ಆದೇಶದಲ್ಲಿ ವಿವರಿಸಿದ್ದಾರೆ.
https://www.suddikanaja.com/2021/05/30/good-news-by-shimul/
ವಿಶ್ವವಿದ್ಯಾಲಯ, ಶಿಕ್ಷಣ ಸಂಸ್ಥೆಗಳಿಗೂ ಅನ್ವಯ | ಸರ್ಕಾರದ ಮತ್ತು ಜಿಲ್ಲಾ ಪಂಚಾಯಿತಿಗಳ ಪೂರ್ಣಾವಧಿ ನೌಕರರಿಗೆ, ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ವರ್ಕ್ ಚಾರ್ಜ್ ನೌಕರರಿಗೆ, ಸರ್ಕಾರದಿಂದ ಸಹಾಯ ಅನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆ ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ನೌಕರರಿಗೆ ಈ ಆದೇಶ ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ.
ಮಂಡಳಿ, ಯುಎಲ್.ಬಿಗಳಿಗೆ ಶಾಕ್ | ರಾಜ್ಯ ಸರ್ಕಾರದ ನಿಗಮ, ಮಂಡಳಿ, ಸ್ಥಳೀಯ ಸಂಸ್ಥೆಗಳು, ಸರ್ಕಾರಿ, ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಮತ್ತು ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ 2012ರಡಿ ಬರುವ ನೌಕರರೂ ಈ ಆದೇಶ ವ್ಯಾಪ್ತಿಗೆ ಒಳಪಡುತ್ತಾರೆ.
https://www.suddikanaja.com/2021/01/02/shivamogga-airport-work-will-compete-in-2021/