ಸುದ್ದಿ ಕಣಜ.ಕಾಂ
ಶಿಕಾರಿಪುರ: ತಾಲೂಕಿನ ಮಳವಳ್ಳಿ ತಾಂಡಾದ ಮನೆಯೊಂದರ ಮೇಲೆ ಅಬಕಾರಿ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ.
ಮಳವಳ್ಳಿ ತಾಂಡಾದ ಕುಮಾರ್ ನಾಯ್ಕ್ ಎಂಬುವವರ ಮನೆಯ ಮೇಲೆ ದಾಳಿ ಮಾಡಲಾಗಿದ್ದು, ಮೂರು ಲೀಟರ್ ಕಳಭಟ್ಟಿ ಮತ್ತು ಅದನ್ನು ತಯಾರಿಸಲು ಬಳಸಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಅಬಕಾರಿ ಇಲಾಖೆ ಉಪ ಆಯುಕ್ತ ಕ್ಯಾಪ್ಟನ್ ಅಜಿತ್ ಕುಮಾರ್ ಮಾರ್ಗದರ್ಶನದಲ್ಲಿ ಸಾಗರ ಉಪ ವಿಭಾಗದ ಉಪ ಅಧೀಕ್ಷಕ ಕೆ.ಎಚ್. ರಮೇಶ್ ನೇತೃತ್ವದಲ್ಲಿ ನಿರೀಕ್ಷಕ ಹಾಲ ನಾಯ್ಕ್, ಶಿಕಾರಿಪುರ ವಲಯ ಕಚೇರಿಯ ಅಬಕಾರಿ ಕಾನ್ಸ್ಟೇಬಲ್ ಮಂಜುನಾಥ್, ಕನಕಪ್ಪ, ಹನುಮಂತಪ್ಪ, ಬಸವರಾಜ್, ಸಿದ್ದಲಿಂಗಪ್ಪ ಕಾರ್ಯಾಚರಣೆ ನಡೆಸಿದ್ದಾರೆ.