ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೇಂದ್ರ ಸರ್ಕಾರದ ‘ಆತ್ಮ ನಿರ್ಭರ್’ ಯೋಜನೆ ಅಡಿ 2021-22ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ನ್ಯಾಷನಲ್ ಬೀ ಕೀಪಿಂಗ್ ಹನಿ ಆ್ಯಂಡ್ ಮಿಷನ್ (ಎನ್.ಬಿ.ಎಚ್.ಎಂ) ಯೋಜನೆ ಅಡಿ ಜೇನು ಕೃಷಿಕರು ಮತ್ತು ಉದ್ದಿಮೆದಾರರ ಅನುಕೂಲಕ್ಕಾಗಿ ‘ಮಧುಕ್ರಾಂತಿ’ ವೆಬ್ಪೋರ್ಟಲ್ ಅಭಿವೃದ್ದಿಪಡಿಸಲಾಗಿದೆ ಎಂದು ತೋಟಗಾರಿಕೆ ಉಪ ನಿರ್ದೇಶಕರು ತಿಳಿಸಿದ್ದಾರೆ.
READ | ಆಗುಂಬೆ ಘಾಟಿ ರೀ ಓಪನ್, ವಾಹನ ಸಂಚಾರಕ್ಕೆ ಅವಕಾಶ, ಮಳೆ ಬಂದರಷ್ಟೇ ಈ ನಿಯಮ ಅನ್ವಯ
ಡಿಜಿಟಲ್ ಪ್ಲಾಟ್ ಫಾರ್ಮ್ ನಲ್ಲಿ ಜೇನು ತುಪ್ಪ ಮತ್ತು ಇತರ ಜೇನು ಗೂಡಿನ ಉತ್ಪನ್ನಗಳ ಉತ್ಪಾದಕತೆಯ ವಿವರ, ಜೇನು ತುಪ್ಪ ಮತ್ತು ಜೇನಿನ ಇತರೆ ಉತ್ಪನ್ನಗಳನ್ನು ಡಿಜಿಟಲ್ ಮಾರುಕಟ್ಟೆ ಮಾಡಲು ಅನುಕೂಲವಾಗುವಂತೆ, ‘ಮಧುಕ್ರಾಂತಿ’ ಪೋರ್ಟಲ್ ಎಂಬ ವೆಬ್ಪೋರ್ಟಲ್ ಅಭಿವೃದ್ಧಿಪಡಿಸಲಾಗಿದೆ. ಕಡ್ಡಾಯವಾಗಿ ಎಲ್ಲ ಜೇನು ಕೃಷಿಕರು, ಉದ್ದಿಮೆದಾರರು, ಜೇನು ಉತ್ಪಾದನಾ ಸಂಘ ಸಂಸ್ಥೆಗಳು ಹಾಗೂ ಜೇನು ಸಂಸ್ಕರಣೆದಾರರು https://allbankcare.in/nbbನಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ ಹಾಗೂ ಹೋಬಳಿ ಮಟ್ಟದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು.
https://www.suddikanaja.com/2021/01/28/areca-nut-added-in-drugs-category-blunder-by-krishi-marata-vahini/