ಸುದ್ದಿ ಕಣಜ.ಕಾಂ
ಭದ್ರಾವತಿ: ಜಿಂಕ್ ಲೈನ್ ನಲ್ಲಿರುವ ನ್ಯಾಯಬೆಲೆ ಅಂಗಡಿಯೊಂದರ ಲೈಸೆನ್ಸ್ ಅನ್ನು ಅಮಾನತುಗೊಳಿಸಿ ಬುಧವಾರ ಆದೇಶಿಸಲಾಗಿದೆ.
https://www.suddikanaja.com/2021/04/15/ksrtc-strike-four-people-suspend-four-transfer/
ವಾರ್ಡ್ ನಂಬರ್ 31ರ ವ್ಯಾಪ್ತಿಯಲ್ಲಿರುವ ವೈ.ವಿ.ಮೋಹನ್ ಕುಮಾರ್ ಎಂಬುವವರ ಕಾಮಧೇನು ನ್ಯಾಯ ಬೆಲೆ ಅಂಗಡಿಯ ಲೈಸೆನ್ಸ್ ಅನ್ನು ಅಮಾನತುಗೊಳಿಸಲಾಗಿದೆ.
READ | ಸೋಶಿಯಲ್ ಮೀಡಿಯಾದಲ್ಲಿ ಶುರುವಾಯ್ತು #AnanthnagforPadma ಅಭಿಯಾನ, ಘಟಾನುಘಟಿ ಸಿನಿ ತಾರೆಯರಿಂದ ಸಪೋರ್ಟ್
ಅಮಾನತಿಗೇನು ಕಾರಣ | ಜಿಲ್ಲಾಧಿಕಾರಿಗಳು ಕಾನೂನು ಮಾಪನ ಶಾಸ್ತ್ರ ಇಲಾಖೆ ನೇತೃತ್ವದಲ್ಲಿ ರಚಿಸಿರುವ ವಿಶೇಷ ತಂಡ ಇತ್ತೀಚೆಗೆ ಭದ್ರಾವತಿಯಲ್ಲಿ ಪರಿಶೀಲನೆಗೆಂದು ಹೋದಾಗ ನ್ಯಾಯ ಬೆಲೆ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಗ ತೂಕದಲ್ಲಿ ವ್ಯತ್ಯಾಸ ಇರುವುದು ಕಂಡುಬಂದಿದೆ. 40 ಕೆಜಿ ಅಕ್ಕಿ ತೂಕದಲ್ಲಿ ಮೂರು ಕೆಜಿ ಕಡಿಮೆ ಇರುವುದು ಪರಿಶೀಲನೆ ವೇಳೆ ಪತ್ತೆಯಾಗಿದೆ.
ಈ ಕಾರಣಕ್ಕೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕರು ಲೈಸೆನ್ಸ್ ಅನ್ನು ಅಮಾನತುಗೊಳಿಸಿದ್ದಾರೆ.
https://www.suddikanaja.com/2021/04/28/new-ration-card-number-distribution/