ಸುದ್ದಿ ಕಣಜ.ಕಾಂ
ಸಾಗರ: ನೆಟ್ವರ್ಕ್ ಗಾಗಿ ಆರಂಭಗೊಂಡಿದ್ದ `ನೋ ನೆಟ್ವರ್ಕ್, ನೋ ವೋಟಿಂಗ್’ ಅಭಿಯಾನಕ್ಕೆ ಪಕ್ಷಾತೀತ ಬೆಂಬಲ ವ್ಯಕ್ತವಾಗಿದೆ. ಸಾಗರ ತಾಲೂಕಿನ ಕರೂರು ಭಾರಂಗಿ ವ್ಯಾಪ್ತಿಯ ಹಿನ್ನೀರು ಗ್ರಾಮಗಳಲ್ಲಿನ ಜನರ ಗೋಳಿಗೆ ಹಾಲಿ ಶಾಸಕ ಮತ್ತು ಮಾಜಿ ಶಾಸಕರು ಬೆಂಬಲ ಸೂಚಿಸಿದ್ದಾರೆ.
ಬರುವ ಜುಲೈ 20ರಂದು ಬೆಂಗಳೂರಿಗೆ ಹೋಗಲಿದ್ದು, ಆಗ ನೆಟ್ವರ್ಕ್ ಸಮಸ್ಯೆಯ ವಿಚಾರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೆ ತರಲಾಗುವುದು.
– ಹರತಾಳು ಹಾಲಪ್ಪ, ಸಾಗರ ಶಾಸಕ
ಹಲವು ವರ್ಷಗಳಿಂದ ನೆಟ್ವರ್ಕ್ ಸಮಸ್ಯೆಯನ್ನು ಎದುರಿಸುತ್ತಿರುವ ಗ್ರಾಮಸ್ಥರು ಇತ್ತೀಚೆಗೆ ರೊಚ್ಚಿಗೆದ್ದು ನೋ ನೆಟ್ವರ್ಕ್ ನೋ ವೋಟಿಂಗ್ ಅಭಿಯಾನ ಆರಂಭಿಸಿದ್ದರು. ಒಂದುವೇಳೆ, ನೆಟ್ವರ್ಕ್ ನೀಡದಿದ್ದರೆ ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಲಾಗಿತ್ತು. ಅವರ ಪರ ಶಾಸಕ ಹರತಾಳು ಹಾಲಪ್ಪ ಮತ್ತು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಬ್ಯಾಟಿಂಗ್ ಮಾಡಿದ್ದಾರೆ.
https://www.suddikanaja.com/2021/07/13/no-network-no-voting-campaign-in-malenadu/
ಎಲ್ಲ ಕ್ಷೇತ್ರದ ಮೇಲೆಯೂ ಎಫೆಕ್ಟ್ | ನೆಟ್ವರ್ಕ್ ಸಮಸ್ಯೆ ವಿದ್ಯಾರ್ಥಿಗಳ ಶಿಕ್ಷಣ ಸೇರಿದಂತೆ ಬ್ಯಾಂಕಿಂಗ್, ಪಡಿತರ, ಆನ್ ಲೈನ್ ವ್ಯವಹಾರಕ್ಕೆ ತೊಡಕು ಆಗುತ್ತಿದೆ. ಈ ಬಗ್ಗೆ ಸಂಸದರಾದಿಯಾಗಿ ಕೇಂದ್ರ ಸರ್ಕಾರದ ಗಮನವನ್ನೂ ಸೆಳೆಯಲಾಗಿದೆ. ಆದರೆ, ಪ್ರಯೋಜನ ಮಾತ್ರ ಆಗಿಲ್ಲ. ಇದರ ವಿರುದ್ಧ ಗ್ರಾಮಸ್ಥರು ಸಿಡಿದೆದ್ದಿದ್ದಾರೆ.
ಸಿಎಂಗೆ ಕಾಗೋಡು ಪತ್ರ | ನೆಟ್ವರ್ಕ್ ಸಮಸ್ಯೆಯ ಬಗ್ಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಮುಖ್ಯಮಂತ್ರಿ ಅವರಿಗೆ ಪತ್ರ ಕೂಡ ಬರೆದಿದ್ದಾರೆ. ಟವರ್ ನಿರ್ಮಾಣದ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರ ಜತೆ ಮಾತನಾಡುವುದಾಗಿ ತಿಮ್ಮಪ್ಪ ತಿಳಿಸಿದ್ದಾರೆ.
https://www.suddikanaja.com/2021/07/14/solution-to-network-problem-in-rural-area/