ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಹೆಚ್ಚಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಹೊಸಗರ, ಸಾಗರ ಭಾದಗದಲ್ಲಿಯೂ ನದಿ, ಹಳ್ಳ ಕೊಳ್ಳಗಳು ಜನಜೀವನವನ್ನು ಅಸ್ತವ್ಯಸ್ತಗೊಳಿಸಿವೆ.
ಶಿವಮೊಗ್ಗದಲ್ಲಿಯೂ ತುಂಗಾ ನದಿಯ ಆರ್ಭಟ ಜೋರಾಗಿದೆ. ಶೃಂಗೇರಿ, ತೀರ್ಥಹಳ್ಳಿ ಭಾಗದಲ್ಲಿ ಸುರಿಯುತ್ತಿರುವ ವರ್ಷಧಾರೆಯಿಂದಾಗಿ ರಾತ್ರೋರಾತ್ರಿ ಮೂರು ಅಡಿ ನೀರು ಏರಿಕೆಯಾಗಿದ್ದು, ಬೆಳಗ್ಗೆ 11ರ ಹೊತ್ತಿಗೆ 65,000 ಕ್ಯೂಸೆಕ್ಸ್ ನೀರು ಹೊಳೆಗೆ ಬಿಡಲಾಗಿದೆ. ನದಿಯ ಅಕ್ಕ ಪಕ್ಕ ವಾಸವಾಗಿರುವ ಜನರಲ್ಲಿ ಭೀತಿ ಶುರುವಾಗಿದೆ.
ಒಂದುವೇಳೆ, ಇದೇ ರೀತಿ ಮಳೆ ಮುಂದುವರಿದರೆ ನದಿಯ ಇಕ್ಕೆಲಗಳಲ್ಲಿನ ಜನವಸತಿ ಪ್ರದೇಶಗಳಿಗೆ ತೊಂದರೆ ಆಗಲಿದೆ. ಮಂಡ್ಲಿ ಭಾಗದಲ್ಲಿ ಹಲವೆಡೆ ನೀರು ನುಗ್ಗುವ ಸ್ಥಿತಿ ನಿರ್ಮಾಣವಾಗಿದೆ. 70,000 ಕ್ಯೂಸೆಕ್ಸ್ ನೀರು ಜಲಾಶಯದಿಂದ ಹೊರಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.