ಸುದ್ದಿ ಕಣಜ.ಕಾಂ | CITY | RELIGIOUS
ಶಿವಮೊಗ್ಗ: ನಗರದಲ್ಲಿ ಗಿಡಗಳಿಗೆ ರಾಖಿ ಕಟ್ಟುವ ಮೂಲಕ ಪರೋಪಕಾರಂ ತಂಡದಿಂದ ವಿನೂತನವಾಗಿ ರಕ್ಷಾ ಬಂಧನ ಹಬ್ಬವನ್ನು ಭಾನುವಾರ ಆಚರಿಸಲಾಯಿತು.
READ | ರಕ್ಷಾ ಬಂಧನದ ಹಿಂದಿನ ರೋಚಕ ಕಥೆಗಳು ನಿಮಗೆ ಗೊತ್ತಾ?
‘ಗಿಡಗಳಿಗೆ ರಕ್ಷೆ ನೀಡುತ್ತೇವೆ. ಅವುಗಳನ್ನು ಸಂರಕ್ಷಿಸುತ್ತೇವೆ’ ಎಂಬ ಧ್ಯೇಯದೊಂದಿಗೆ ಸಂಕಲ್ಪ ಮಾಡಿ ಗಿಡಗಳಿಗೆ ರಾಕಿ ಕಟ್ಟುವ ಮೂಲಕ ವಿಶೇಷವಾಗಿ ರಕ್ಷಾ ಬಂಧನವನ್ನು ಆಚರಿಸಲಾಯಿತು.
ಪರೋಪಕಾರಂನ ಶ್ರೀಧರ್, ತ್ಯಾಗರಾಜ್, ಕಾಟನ್ ಜಗದೀಶ್, ಜೋಡ್ಯಾಕ್ ಪ್ರಕಾಶ್, ಮೋಹನ್, ಶ್ರೀಕಾಂತ್ ಹೊಳ್ಳ, ಮುಕೇಶ್ ಜೈನ್, ಬಾಲಕೃಷ್ಣ ನಾಯ್ಡು ಉಪಸ್ಥಿತರಿದ್ದರು.