ಸುದ್ದಿ ಕಣಜ.ಕಾಂ | TALUK | CRIME
ಶಿವಮೊಗ್ಗ: ಕೆ.ಎಂ.ಎಫ್. ಡೈರಿಯಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಕೊಂಡೊಯ್ಯುತ್ತಿದ್ದ ಕ್ಯಾಂಟರ್ ವೊಂದು ಭೀಕರ ಅಪಘಾತಕ್ಕೀಡಾದ ಘಟನೆ ಸೋಮವಾರ ಬೆಳಗಿನ ಜಾವ ಸಂಭವಿಸಿದೆ.
https://www.suddikanaja.com/2021/07/16/accident-woman-died/
ಆಯನೂರು ಮತ್ತು ಕುಂಸಿ ಮಾರ್ಗದ ಮಧ್ಯೆ ಅಪಘಾತ ಸಂಭವಿಸಿದೆ. ಕ್ಯಾಂಟರ್ ಚಾಲಕ ನಿದ್ದೆ ಮಂಪರಿನಲ್ಲಿ ನೀಲಗರಿ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ. ರಭಸಕ್ಕೆ ವಾಹನದ ಮುಂಭಾಗದ ಸಂಪೂರ್ಣ ನಜ್ಜುಗುಜ್ಜಾಗಿದೆ. ಅದೃಷ್ಟವಷಾತ್ ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕತ್ತಲಿನಲ್ಲೇ ನಡೀತು ಕಾರ್ಯಾಚರಣೆ
ವಾಹನ ಚಾಲಕ ಮಧುಸೂದನ್ ಮತ್ತು ಕ್ಲೀನರ್ ಸಂತೋಷ್ ಕ್ಯಾಂಟರಿನಲ್ಲಿದ್ದರು. ಚಾಲಕ ವಾಹನದಿಂದ ಹೊರಬಂದಿದ್ದು, ಕ್ಲೀನರ್ ಸಂತೋಷ್ ವಾಹನದ ಕ್ಯಾಬಿನ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಸೊಂಟದ ಕೆಳಭಾಗ ಎರಡು ಕಾಲು ಮುರಿದುಕೊಂಡು ಹೊರಬರಲಾರದೆ ಒದ್ದಾಡುತಿದ್ದರು. ಆಗ ಅಗ್ನಿಶಾಮಕ ಠಾಣೆ ಸಿಬ್ಬಂದಿ ಸಹಾಯಕ್ಕೆ ಧಾವಿಸಿದ್ದಾರೆ.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ಆರ್.ಅಶೋಕ್ ಕುಮಾರ್, ಅಗ್ನಿಶಾಮಕ ಠಾಣಾಧಿಕಾರಿ ಕೆ.ಎನ್.ಪ್ರವೀಣ್, ಸಿಬ್ಬಂದಿ ಎಚ್.ಸುನೀಲ್ , ವಿಜಯ್ ಖುರೇಶಿ, ಮನುನಾಥ್, ವಿಷ್ಣು ನಾಯ್ಕ್, ದೇವರಾಜ್, ಮೂಡಬಸಪ್ಪ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ಕ್ಲೀನರ್ ಸಂತೋಷ ಅವರನ್ನು ವಾಹನದಿಂದ ಹೊರತೆಗೆದು ಆಂಬ್ಯುಲೆನ್ಸ್ ನಲ್ಲಿ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ.
https://www.suddikanaja.com/2021/03/06/areca-nut-growers-demand-for-one-district-one-product/