ಸುದ್ದಿ ಕಣಜ.ಕಾಂ | TALUK| ENTERTAINMENT NEWS
ಸಾಗರ: ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ವಿನ್ನರ್ ಮಂಜು ಪಾವಗಡ ಅವರು ಸೋಮವಾರ ಸಾಗರಕ್ಕೆ ಭೇಟಿ ನೀಡಿದ್ದು, ಅಭಿಮಾನಿಗಳು ಅತ್ಯಂತ ಪ್ರೀತಿಯಿಂದ ಅವರನ್ನು ಸ್ವಾಗತಿಸಿದರು.
https://www.suddikanaja.com/2021/05/08/big-boss-season-8-suspended-due-to-covid-lockdown-said-by-parameshwar-gundkal/
ಜೆ.ಸಿ.ರಸ್ತೆಯಲ್ಲಿರುವ ಪ್ರಸಿದ್ಧ ಮಾರಿಗುಡಿಗೆ ಭೇಟಿ ನೀಡಿದ ಅವರು ದೇವರ ದರ್ಶನ ಪಡೆದು ಕೃತಾರ್ಥರಾದರು. ಸದ್ಗುರು ಹೋಟೆಲ್ ಗೆ ಭೇಟಿ ನೀಡಿದ ಅವರನ್ನು ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಸಂತೋಷ್ ಸದ್ಗುರು ಮತ್ತವರ ಸ್ನೇಹಿತರು ಸ್ವಾಗತಿಸಿದರು.
ಮಂಜು ಪಾವಗಡ ಬಂದಿದ್ದೇಕೆ?
ಸಿರಿವಂತೆಯ ರಾಘವೇಂದ್ರ ಹಾಗೂ ಮಂಜು ಅವರು ಸ್ನೇಹಿತರಾಗಿದ್ದು, ಅವರನ್ನು ಭೇಟಿ ಮಾಡುವುದಕ್ಕಾಗಿ ಬಂದಿದ್ದು, ಸಾಗರದ ಹಲವೆಡೆ ಭೇಟಿ ನೀಡಿದರು. ಈ ವೇಳೆ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ರಾಘವೇಂದ್ರ, ಮಾನಸ ಮತ್ತು ಮಂಜು ಅವರನ್ನು ಸನ್ಮಾನಿಸಿದರು.
ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು
ಮಂಜು ಪಾವಗಡ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದಕ್ಕಾಗಿ ಅಭಿಮಾನಿಗಳು ಮುಗಿಬಿದ್ದಿದ್ದರು. ಈ ವೇಳೆ, ಯಶ್ವಂತ್ ಪಣಿ, ಸ್ವರೂಪ್, ಮಧು ಸೇರಿದಂತೆ ಹಲವರಿದ್ದರು.
https://www.suddikanaja.com/2021/08/15/first-independent-village-issuru-movement/