ಸುದ್ದಿ ಕಣಜ.ಕಾಂ | TALUK | CRIME
ಸೊರಬ: ತಾಲೂಕಿನ ಚಂದ್ರಗುತ್ತಿ ಹೋಬಳಿಯ ಚಿಕ್ಕತೌಡತ್ತಿ ಗ್ರಾಮದಲ್ಲಿ ಮನೆಯೊಂದರ ಬಚ್ಚಲಿನಲ್ಲಿ ಬಚ್ಚಿಟ್ಟಿದ್ದ ಕೊಳೆಯನ್ನು ವಶಕ್ಕೆ ಪಡೆಯಲಾಗಿದೆ.
ಗೋಪಾಲ್ ಎಂಬಾವವರು ಮನೆಯ ಬಚ್ಚಲಲ್ಲಿ 60 ಲೀಟರ್ ಬೆಲ್ಲದ ಕೊಳೆ ಬಚ್ಚಿಟ್ಟಿದ್ದ ಅಬಕಾರಿ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಕೊಳೆಯನ್ನು ವಶಕ್ಕೆ ಪಡೆದಿದ್ದಾರೆ.
ಸೊರಬ ವಲಯದ ಅಬಕಾರಿ ಉಪ ನಿರೀಕ್ಷಕ ಜಿ.ಅಣ್ಣಪ್ಪ, ಸಿಬ್ಬಂದಿ ಬಾಲಚಂದ್ರ, ಗಣಪತಿ, ಮಹಾಂತೇಶ್, ಕಾಂತರಾಜ್ ಅವರನ್ನು ಒಳಗೊಂಡ ತಂಡವು ಕಾರ್ಯಾಚರಣೆ ನಡೆಸಿದ್ದು, ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.