ಸುದ್ದಿ ಕಣಜ.ಕಾಂ | DISTRICT | CINEMA
ಶಿವಮೊಗ್ಗ: ಡಾಕ್ಯೂಮೆಂಟರಿಯೊಂದರ ಚಿತ್ರೀಕರಣಕ್ಕಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಬುಧವಾರ ಸಕ್ರೆಬೈಲು ಆನೆಬಿಡಾರಕ್ಕೆ ಭೇಟಿ ನೀಡಿದರು.
https://www.suddikanaja.com/2021/04/18/adondittu-kala-movie-shooting-in-thirthahalli/
ಮದಗಜಗಳ ತರಬೇತಿ ನೀಡುವ ಜಾಗವಾದ ಕ್ರಾಲ್ ಪ್ರದೇಶದಲ್ಲಿ ಆನೆಗಳೊಂದಿಗೆ ಚಿತ್ರೀಕರಣ ಮಾಡಲಾಗಿದೆ. ಆದರೆ, ಈ ಪ್ರದೇಶಕ್ಕೆ ಸಕ್ರೆಬೈಲು ಸಿಬ್ಬಂದಿ, ಅಧಿಕಾರಿಗಳು ಹಾಗೂ ಚಿತ್ರೀಕರಣ ತಂಡದ ಹೊರತು ಯಾರ ಪ್ರವೇಶಕ್ಕೂ ಅವಕಾಶ ನೀಡಲಿಲ್ಲ. ಹೀಗಾಗಿ, ಕ್ರಾಲ್ ನಿಂದ ಸಾಕಷ್ಟು ದೂರ ಅಭಿಮಾನಿಗಳು ಹಾಗೂ ಮಾಧ್ಯಮದವರು ಕಾಯುತ್ತಿದ್ದರು.
ಕೈ ಬೀಸುತ್ತ ಬಂದ ನಟ ಸಾರ್ವಭೌಮ
ಅಭಿಮಾನಿಗಳ ಒತ್ತಾಸೆಗೆ ಮಣಿದು ನಟ ಪುನೀತ್ ರಾಜಕುಮಾರ್ ಅವರು ಚಿತ್ರೀಕರಣ ಜಾಗದಿಂದ ಸಾರ್ವಜನಿಕರು ಇರುವ ಕಡೆಗೆ ಕೈ ಬೀಸುತ್ತ ಬಂದರು. ಹಸನ್ಮುಖದಿಂದ ಬಂದ ಅವರು ಕೋವಿಡ್ ಇರುವುದರಿಂದ ಯಾವ ವಿಚಾರದ ಬಗ್ಗೆಯೂ ಮಾತನಾಡುವುದಿಲ್ಲ ಎಂದರು.
ಪವರ್ ಸ್ಟಾರ್ ಜತೆ ಸೆಲ್ಫಿಗಾಗಿ ನೂಕುನುಗ್ಗಲು
ಅಭಿಮಾನಿಗಳಿಗೆ ಪುನೀತ್ ಬಂದಿರುವ ವಿಷಯ ಗೊತ್ತಾಗಿದ್ದೇ ಸಕ್ರೆಬೈಲು ಆನೆಬಿಡಾರದ ಕಡೆಗೆ ಧಾವಿಸಿದ್ದಾರೆ. ಚಿತ್ರೀಕರಣದ ನಡುವೇ ಅಭಿಮಾನಿಗಳ ಕಡೆಗೆ ಬಂದಿದ್ದ ಪುನೀತ್ ಅವರ ಜತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದಕ್ಕಾಗಿ ಜನ ಮುಗಿಬಿದ್ದರು.
ಎಲ್ಲೆಲ್ಲಿ ಭೇಟಿ ನೀಡಿದರು?
ಚಿತ್ರೀಕರಣಕ್ಕಾಗಿ ಸಕ್ರೆಬೈಲಿಗೆ ಬಂದಿದ್ದ ಪುನೀತ್ ಅವರು ಈ ಕಾರ್ಯ ಮುಗಿಸಿಕೊಂಡು ವಾಪಸ್ ಹೋಗುವಾಗ ಗಾಜನೂರು ಡ್ಯಾಂಗೆ ಭೇಟಿ ನೀಡಿದರು. ಅಲ್ಲಿಯ ಪ್ರಕೃತಿ ಸೌಂದರ್ಯವನ್ನು ಸವಿದರು.
https://www.suddikanaja.com/2021/05/18/real-star-upendra-purchase-onion-from-farmer/