ಸುದ್ದಿ ಕಣಜ.ಕಾಂ | CITY | CRIME
ಶಿವಮೊಗ್ಗ: ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬನ ತಲೆಗೆ ಬೀಯರ್ ಬಾಟಲಿಂದ ಹೊಡೆದು ಗಾಯಗೊಳಿಸಲಾಗಿದ್ದು, ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾರ್ಡನ್ ಏರಿಯಾದಲ್ಲಿರುವ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ಗುರುವಾರ ರಾತ್ರಿ ಜಗಳವಾಗಿದೆ. ಗಾಂಧಿ ಬಜಾರಿನ ಯೋಗೇಶ್(48) ಎಂಬುವವನ ತಲೆಗೆ ಗಾಯವಾಗಿದೆ. ಸವಾಯಿಪಾಳ್ಯದ ಶಾಹೀದ್ ಖಾನ್ ಎಂಬಾತ ಹಲ್ಲೆ ಮಾಡಿದ್ದಾನೆ.