ಸುದ್ದಿ ಕಣಜ.ಕಾಂ | DISTRICT | POLITICAL NEWS
ಶಿವಮೊಗ್ಗ: ಹೊಳೆಹೊನ್ನೂರಿನಿಂದ ಶಿವಮೊಗ್ಗಕ್ಕೆ ರಸ್ತೆ ಸರಿಯಿಲ್ಲದ್ದಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (thawar chand gehlot )ಅವರನ್ನು ಹೊಳಲೂರು ಮಾರ್ಗದಿಂದ ಕರೆದುಕೊಂಡು ಬರಲಾಗಿದೆ.
ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ
ಹೊಳೆಹೊನ್ನೂರು-ಶಿವಮೊಗ್ಗ ಮಾರ್ಗ ಗುಂಡಿಗಳಿಂದ ಆವೃತ್ತವಾಗಿದೆ ಎಂಬ ಕಾರಣಕ್ಕೆ ರಾಜ್ಯಪಾಲರನ್ನು ಅರಹತೊಳಲು ಕೈಮರದಿಂದ 28 ಕಿ.ಮೀ ದೂರದ ಹೊಳಲೂರು ಮಾರ್ಗವಾಗಿ ಕರೆತರಲಾಗಿದೆ.
ಅಧಿಕಾರಿಗಳ ಈ ನಡೆಯು ಭಾರಿ ಚರ್ಚೆಗೆ ಗ್ರಾಸವಾಗಿದೆ. ರಸ್ತೆ ಸಂಪೂರ್ಣ ಹಾಳಾಗಿದ್ದನ್ನು ಅದನ್ನು ರಿಪೇರಿ ಮಾಡದ ಅಧಿಕಾರಿಗಳು ರಾಜ್ಯಪಾಲರನ್ನು ಇನ್ನೊಂದು ಮಾರ್ಗದ ಮೂಲಕ ಕರೆದುಕೊಂಡು ಹೋಗಿದ್ದಾರೆ. ನಿತ್ಯ ಸಾರ್ವಜನಿಕರು ಇದೇ ಮಾರ್ಗದಲ್ಲಿ ಓಡಾಡುತಿದ್ದು ರಸ್ತೆಯನ್ನು ಕೂಡಲೇ ಸರಿಪಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ರಾಜ್ಯಪಾಲರು ಶಿವಮೊಗ್ಗಕ್ಕೆ ತೆರಳಲಿರುವ ಸುಮಾರು 5-6 ಕಿ.ಮೀ. ಮಾರ್ಗದಲ್ಲಿಯ ಗುಂಡಿಗಳನ್ನು ಪಿಡಬ್ಲ್ಯುಡಿ ಅಧಿಕಾರಿಗಳು ಜಲ್ಲಿ ಹಾಕಿ ಮುಚ್ಚಿಸಿದ್ದರು. ಗ್ರಾಮದಲ್ಲಿ ಬ್ಯಾರಿಕೆಡ್ ಗಳನ್ನು ಹಾಕಿ ಭದ್ರತೆಯನ್ನೂ ಒದಗಿಸಲಾಗಿತ್ತು. ಕೈಮರ, ಸನ್ಯಾಸಿಕೋಡಮಗ್ಗಿ, ಹೊಳಲೂರು ಮಾರ್ಗವಾಗಿ ರಾಜ್ಯಪಾಲರು ಶಿವಮೊಗ್ಗಕ್ಕೆ ಬುಧವಾರ ಆಗಮಿಸಿದ್ದಾರೆ.
https://www.suddikanaja.com/2021/10/14/deputy-commissioner-grama-vastavya/